ಉಜಿರೆ : ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಹಿರಿಯ ಅರ್ಚಕರು, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಹಿರಿಯ ಸದಸ್ಯ ಕೆ.ಕೃಷ್ಣ ಮೂರ್ತಿ ಹೊಳ್ಳ ಕಿರಿಯಾಡಿ ಇವರು ಸೆ. 11ರಂದು ನಿಧನರಾದರು.
ಇವರು ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನ ಮತ್ತು ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಅರ್ಚಕರರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ವಿಜಯಲಕ್ಷ್ಮೀ, ಮಕ್ಕಳಾದ ರಾಘವೇಂದ್ರ ಹೊಳ್ಳ, ಸೌಮ್ಯ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.












