27.8 C
ಪುತ್ತೂರು, ಬೆಳ್ತಂಗಡಿ
September 12, 2026
ಜಿಲ್ಲಾ ಸುದ್ದಿ

ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರ ಸಂಘ (ನಿ )- ವಾರ್ಷಿಕ ಮಹಾಸಭೆ

ಮಂಗಳೂರು:ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಆರ್ಥಿಕ ವರ್ಷ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ 12 ರಂದು ಶ್ರೀ ರಾಧಾಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿಯವರು ವಹಿಸಿದ್ದರು.ಸದಸ್ಯೆ ಶ್ರೀಮತಿ ಸ್ವಾತಿ ಸತೀಶ್ ಅವರ ಪ್ರಾರ್ಥನೆಯೊಂದಿಗೆ ಆರoಭಗೊಂಡ ಸಹಕಾರಿ ಸಂಘದ ನಿರ್ದೇಶಕರಾದ ಎಂ ಜಯರಾಮ್ ಭಂಡಾರಿಯವರು ಸ್ವಾಗತಿಸಿದರು. ನಿರ್ದೇಶಕರಾದ ಕೊಡಂಗೆ ಬಾಲಕೃಷ್ಣ ನಾಯ್ಕ್ ಅವರು ಸಹಕಾರ ಗೀತೆಯನ್ನು ಹಾಡಿದರು. ವರದಿ ವರ್ಷದಲ್ಲಿ ಮೃತರಾದ ಸದಸ್ಯರಿಗೆ ನಿರ್ದೇಶಕರಾದ ಮಹಾಲಿಂಗೇಶ್ವರ ಭಟ್ ಬಿ ಅವರು ಶೃದ್ದಾoಜಲಿ ಅರ್ಪಿಸಿದರು.ಸಹಕಾರ ಸಂಘದ ಶಾಖಾ ವ್ಯವಸ್ಥಾಪಕಿ ವೀಣಾ ಕುಮಾರಿ ಬಿ ರವರು ಮಹಾಸಭೆಯ ಕಾರ್ಯಸೂಚಿಯನ್ನು ಸಭೆಗೆ ವಾಚಿಸಿದರು.. ಹಿರಿಯ ಗುಮಾಸ್ತೆ ವಂದಿತಾ ಜೆ ಎಂ ಅವರು ಸಹಕಾರ ಸಂಘದ ಕಳೆದ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಾಂತ್ ಸಿ ಎಚ್ ಕಳೆದ ಆರ್ಥಿಕ ವರ್ಷದ ಪರಿಶೋದಿತ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಸಹಕಾರ ಸಂಘದ ಸಲಹೆಗಾರರಾದ ರಾಮಯ ಶೆಟ್ಟಿಯವರು ಆರ್ಥಿಕ ವರ್ಷ 2025-26 ನೇ ಸಾಲಿನ ಆಯ -ವ್ಯಯದ ವ್ಯತ್ಯಾಸವನ್ನು ಮತ್ತು ಆರ್ಥಿಕ ವರ್ಷ 2026-27 ನೇ ಸಾಲಿನ ಮುಂಗಡ ಪತ್ರವನ್ನು ಸಭೆಯ ಮುಂದಿಟ್ಟರು


ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರಾದ ಸುಧಾಕರ್ ಜೋಗಿ, ವೆಂಕಟರಮಣ ಭಟ್, ಪ್ರಶಾಂತ್ ಕೋಟ್ಯಾನ್ ಗೋಕುಲ್ ದಾಸ್ ಹೆಗ್ಡೆ ಹಾಗೂ ಇನ್ನೂ ಹಲವು ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಆರ್ಥಿಕ ವರ್ಷ 2025-26 ರಲ್ಲಿ ಸಂಘವು ರೂ. 20 ಕೋಟಿಗಳ ವ್ಯವಹಾರ ದಾಖಸಿದ್ದು ರೂ. 7.20 ಲಕ್ಷಗಳ ನಿವ್ವಳ ಲಾಭಾoಶ ಗಳಿಸಿದೆ.ಸಹಕಾರ ಸಂಘದ ಸದಸ್ಯರ ಪಾಲು ಬಂಡವಾಳದ ಮೇಲೆ ಶೇ. 11ರಂತೆ ಡಿವಿಡೆಂಡ್ ಘೋಷಿಸಲಾಯಿತು.ಸಹಕಾರ ಸಂಘದ ನಿರ್ದೇಶಕ ಮಂಡಳಿಯ ಇತರ ಸದಸ್ಯರಾದ ವಿಶ್ವನಾಥ ಗಟ್ಟಿ, ಶ್ರೀ ಕಾಶೀನಾಥ್ ಪುತ್ರನ್ ಶ್ರೀನಿವಾಸ ಕಣ್ವತೀರ್ಥ, ಸ್ಟ್ಯಾನಿ ಡಿಸೋಜ, ಲೀಲಾವತಿ ಕೆ, ಶೀಮತಿ ಮೃಣಾಲಿನಿ, ಕಿಶೋರ್ ಕುಟಿನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹಕಾರ ಸಂಘದ ಸಿಬ್ಬಂದಿ ರೇಷ್ಮಾ ಸಹಕರಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ SSLC ಮತ್ತು PUC ಯಲ್ಲಿ ಉತ್ತಮ ಸಾಧನೆ ದಾಖಲಿಸಿದ ಸಹಕಾರ ಸಂಘದ ಸದಸ್ಯರ 11 ಮಕ್ಕಳಿಗೆ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ದಿವಂಗತ ಪಿ ಜೆ ಸಾಲ್ದಾನ್ಹರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮವನ್ನು ನಿರ್ದೇಶಕರಾದ ಎಚ್ ಸುಬ್ರಹ್ಮಣ್ಯ ಭಟ್ ಅವರು ನಿರ್ವಹಿಸಿದರು. ನಿರ್ದೇಶಕಿ ಶ್ರೀಮತಿ ರಾಜೀವಿ ವಿ ಅವರು ವಂದನಾರ್ಪಣೆಗೈದರು..

Related posts

ಚಾರ್ಮಾಡಿ ಘಾಟಿಯಲ್ಲಿ ಚಿರತೆ: ವಾಹನ ಸವಾರರಲ್ಲಿ ಆತಂಕ

Suddi Udaya

ತಣ್ಣೀರುಪಂತ : ಶಾಸಕ ಹರೀಶ್ ಪೂಂಜ ಹಾಗೂ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲರಿಗೆ ಗೌರವಾರ್ಪಣೆ: ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ, ಅಭಿಮಾನಿ ಬಳಗ ಹಾಗೂ ಊರಿನ ಸಮಸ್ತ ಬಂಧುಗಳ ವತಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya

ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30 ಕ್ಕೆ ಮುಂದೂಡಿಕೆ

Suddi Udaya

ಬಿಜೆಪಿಯಿಂದ 241 ಬೂತ್‌ಗಳಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ ಅಭಿಯಾನ

Suddi Udaya

ಕೇಂದ್ರ ಬಜೆಟ್ 2026: ವಿಕಸಿತ ಭಾರತಕ್ಕೆ ಪೂರಕವಾಗಿರುವ ಬಜೆಟ್‌: ಪ್ರತಾಪಸಿಂಹ ನಾಯಕ್

Suddi Udaya
error: Content is protected !!