ಬೆಳ್ತಂಗಡಿ: ಶ್ರೀ ಮಹಾಗಣಪತಿ ಭಜನಾ ಮಂಡಳಿ ಕುದ್ರಡ್ಕ ಭಜನಾ ಮಂದಿರದಲ್ಲಿ ಶ್ರೀಗಣೇಶ ಚತುರ್ಥಿಯ ಪ್ರಯುಕ್ತ ಶ್ರೀದೇವರಿಗೆ 12 ತೆಂಗಿನಕಾಯಿಯ ಗಣಪತಿ ಹವನ ಮತ್ತು ಭಜನಾ ಸೇವೆಯು ನೆರವೇರಿತು.
ಭಜನಾ ಸೇವೆಯನ್ನು ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಾಲಾಡಿ ಸೋಣಂದೂರು ಮತ್ತು ಶ್ರೀ ಮಹಾಗಣಪತಿ ಭಜನಾ ಮಂಡಳಿ ಕುದ್ರಡ್ಕ ಇದರ ಸದಸ್ಯರು, ಭಜನಾ ವಿದ್ಯಾರ್ಥಿಗಳು ಹಾಗೂ ಮಹಿಳಾ ಕುಣಿತ ಭಜನಾ ತಂಡಗಳು ನೆರವೇರಿಸಿದರು. ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣಾ ವ್ಯವಸ್ಥೆಯನ್ನು ಮಾಡಲಾಯಿತು.











