ಬೆಳ್ತಂಗಡಿ : ನಾಳ ಗ್ರಾಮದ ವಿಶೇಷ ಚೇತನರಾಗಿರುವ ಚಿರಂಜೀವಿ ಶೆಟ್ಟಿ ಮತ್ತು ಇವರ ತಂಡ ಸೆ.14 ರಂದು ಗಣೇಶ ಚತುರ್ಥಿಯ ಆಚರಣೆಯನ್ನು ಬೆಳ್ತಂಗಡಿ ತಾಲೂಕಿನ 20 ಸ್ಥಳಗಳಿಗೆ ಭೇಟಿ ನೀಡಿ ವಿಭಿನ್ನ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಜನರ ಪ್ರೀತಿಯನ್ನು ಗಳಿಸಿದ್ದಾರೆ.

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳೆಂಜ ಪೂರ್ಣ ಸಹಕಾರವನ್ನುನೀಡಿರುತ್ತಾರೆ. ಅಭಿಲಾಶ್ ಖುಷಿ ಆಂಬುಲೆನ್ಸ್ ಬೆಳ್ತಂಗಡಿ, ಸತೀಶ್ ಪವಿತ್ರ ಶೆಟ್ಟಿ, ಸಚಿನ್ ಗೇರುಕಟ್ಟೆ , ಜಗದೀಶ್ ಅರ್ವ ಇವರು ಸಹಕರಿಸುತ್ತಾರೆ.
ತಂಡದ ನಾಯಕ ಚಿರಂಜೀವಿ ಶೆಟ್ಟಿ ನಾಳ, ತಂಡದ ಸದಸ್ಯರು, ಸೃಜನ್ ವೇಣೂರು, ಶೈಲೇಶ್ ಅಳದಂಗಡಿ , ಜೀವನ್ ಅರ್ವ ಭಾಗವಹಿಸಿದರು.











