ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿ ವತಿಯಿಂದ ಸಮಾಜ ಮಂದಿರದಲ್ಲಿ ಆಯೋಜಿಸಿರುವ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ ಬದಲಾವಣೆ ಮಾಡಲಾಗಿದೆ.
ನಾಳೆ (ಸೆ.17) ಪ್ರದರ್ಶನಗೊಳ್ಳಬೇಕಿದ್ದ “ಶೋಭಾಜಿ” ನಾಟಕದ ಪ್ರಮುಖ ಕಲಾವಿದೆ ಅಪಘಾತಕ್ಕೊಳಗಾದ ಕಾರಣ ಅನಿವಾರ್ಯವಾಗಿ “ಶೋಭಾಜಿ” ನಾಟಕವನ್ನು ರದ್ದುಗೊಳಿಸಲಾಗಿದೆ.
ಅದರ ಬದಲು 200ಕ್ಕೂ ಅಧಿಕ ಪ್ರದರ್ಶನ ಕಂಡು ಎಲ್ಲೆಡೆ ಕಲಾಭಿಮಾನಿಗಳ ಮೆಚ್ಚುಗೆ ಪಡೆದ ಯಶಸ್ವಿ ನಾಟಕ “ಅಧ್ಯಕ್ಷೆರ್” ನಾಟಕವನ್ನು ಪ್ರದರ್ಶಿಸಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಕಲಾಭಿಮಾನಿಗಳು ಈ ಅನಿವಾರ್ಯ ಸ್ಥಿತಿಯನ್ನು ಅರ್ಥಮಾಡಿಕೊಂಡು ನಾಳಿನ ಪ್ರದರ್ಶನಕ್ಕೆ ಆಗಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿ ಸಮಿತಿ ವಿನಂತಿಸಿದೆ.











