30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯಕ್ಷ ಭಾರತಿಯ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನ “ಚೌತಿಯ ಮಹಿಮೆ”.

ಕನ್ಯಾಡಿ: ಸಿದ್ಧಿವಿನಾಯಕ ಸೇವಾ ಸಮಿತಿ ನೇರೋಳ್ ಪಲ್ಕೆ ಕನ್ಯಾಡಿ-2 ವತಿಯಿಂದ ನಡೆಯುವ 25ನೇ ವರ್ಷದ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.14 ರಂದು ಕನ್ಯಾಡಿಯ ನೇರೋಳ್ ಪಲ್ಕೆಯಲ್ಲಿ ಯಕ್ಷಭಾರತಿ ಕನ್ಯಾಡಿ ಸಂಯೋಜನೆಯಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ- “ಚೌತಿಯ ಮಹಿಮೆ” ಜರುಗಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ ಮತ್ತು ಕುಮಾರಿ ಆಶ್ರಿತಾ ರೆಂಜಾಳ, ಚಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಸತ್ರಾಜಿತನಾಗಿ ಚರಣ್ ಕಾಣಿಯೂರು, ವನಪಾಲಕನಾಗಿ ಶಶಿಧರ ಕನ್ಯಾಡಿ, ಪ್ರಸೇನನಾಗಿ ಶಿವಾನಂದ ಶೆಟ್ಟಿ ಪೆರ್ಲ, ಕೇಸರಿಯಾಗಿ ಮುಖೇಶ್ ದೇವಧರ್ ನಿಡ್ಲೆ, ಜಾಂಬವಂತನಾಗಿ ಡಾ. ಶ್ರುತಕೀರ್ತಿ ರಾಜ ಉಜಿರೆ, ಕೃಷ್ಣನಾಗಿ ವಸಂತ ಗೌಡ ಕಾಯರ್ತಡ್ಕ, ಜಾಂಬವತಿಯಾಗಿ ಕು. ವೈಷ್ಣವಿ ರಾವ್ ಪುತ್ತೂರು ಪಾತ್ರ ನಿರ್ವಹಿಸಿದರು.

Related posts

“ಲೋಕಾಯುಕ್ತ ಜನ ಸಂಪರ್ಕ ಸಭೆ: ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರದ ಕುರಿತು ಜಾಗೃತಿ-ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ

Suddi Udaya

ಧರ್ಮಸ್ಥಳ ಯಕ್ಷಗಾನ ಮೇಳ: ಸೇವೆ ಬಯಲಾಟ ಪ್ರದರ್ಶನ

Suddi Udaya

ಕರಿಮಣಿ ಸರ ಸಹಿತ ಅಗತ್ಯ ವಸ್ತುಗಳು ಕಳೆದು ಹೋಗಿದೆ: ಸಿಕ್ಕಿದವರು ಸಂಪರ್ಕಿಸುವಂತೆ ಮನವಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲೆ ಭಾರತಿ ಬಿ.ಎಂ. ಭೇಟಿ

Suddi Udaya

ಬೆಳ್ತಂಗಡಿ: ಜೀವನ್ ಜ್ಯೋತಿ ಸುರಕ್ಷಾದಿಂದ ಸಹಾಯಧನ ಹಸ್ತಾಂತರ

Suddi Udaya

ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರಕ್ಕೆ ವೇಣು ಉತ್ತಪ್ಪ ಭೇಟಿ

Suddi Udaya
error: Content is protected !!