30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯಕ್ಷ ಭಾರತಿಯ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನ “ಚೌತಿಯ ಮಹಿಮೆ”.

ಕನ್ಯಾಡಿ: ಸಿದ್ಧಿವಿನಾಯಕ ಸೇವಾ ಸಮಿತಿ ನೇರೋಳ್ ಪಲ್ಕೆ ಕನ್ಯಾಡಿ-2 ವತಿಯಿಂದ ನಡೆಯುವ 25ನೇ ವರ್ಷದ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.14 ರಂದು ಕನ್ಯಾಡಿಯ ನೇರೋಳ್ ಪಲ್ಕೆಯಲ್ಲಿ ಯಕ್ಷಭಾರತಿ ಕನ್ಯಾಡಿ ಸಂಯೋಜನೆಯಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ- “ಚೌತಿಯ ಮಹಿಮೆ” ಜರುಗಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ ಮತ್ತು ಕುಮಾರಿ ಆಶ್ರಿತಾ ರೆಂಜಾಳ, ಚಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಸತ್ರಾಜಿತನಾಗಿ ಚರಣ್ ಕಾಣಿಯೂರು, ವನಪಾಲಕನಾಗಿ ಶಶಿಧರ ಕನ್ಯಾಡಿ, ಪ್ರಸೇನನಾಗಿ ಶಿವಾನಂದ ಶೆಟ್ಟಿ ಪೆರ್ಲ, ಕೇಸರಿಯಾಗಿ ಮುಖೇಶ್ ದೇವಧರ್ ನಿಡ್ಲೆ, ಜಾಂಬವಂತನಾಗಿ ಡಾ. ಶ್ರುತಕೀರ್ತಿ ರಾಜ ಉಜಿರೆ, ಕೃಷ್ಣನಾಗಿ ವಸಂತ ಗೌಡ ಕಾಯರ್ತಡ್ಕ, ಜಾಂಬವತಿಯಾಗಿ ಕು. ವೈಷ್ಣವಿ ರಾವ್ ಪುತ್ತೂರು ಪಾತ್ರ ನಿರ್ವಹಿಸಿದರು.

Related posts

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

Suddi Udaya

ಗೋಳಿಯಂಗಡಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ನಾವೂರು : ನಿರ್ಮಾಣವಾಗದ ರಸ್ತೆ, ಸಾರ್ವಜನಿಕರ ಆಕ್ರೋಶ, ಗ್ರಾಮಸ್ಥರೇ ಸೇರಿ ಪರ್ಯಾಯ ರಸ್ತೆ ನಿರ್ಮಾಣ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ “ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ

Suddi Udaya

ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸುವರ್ಣ ದೀಪೋತ್ಸವ ಉದ್ಘಾಟನೆ

Suddi Udaya

ಪುಂಜಾಲಕಟ್ಟೆ: ಶ್ರೀ ಜೈ ಹನುಮಾನ್ ಬಾಲಗೋಕುಲ ಉದ್ಘಾಟನೆ

Suddi Udaya
error: Content is protected !!