26.2 C
ಪುತ್ತೂರು, ಬೆಳ್ತಂಗಡಿ
August 30, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪುಂಜಾಲಕಟ್ಟೆ: ಶ್ರೀ ಜೈ ಹನುಮಾನ್ ಬಾಲಗೋಕುಲ ಉದ್ಘಾಟನೆ

ಪುಂಜಾಲಕಟ್ಟೆ: ಶ್ರೀ ಜೈ ಹನುಮಾನ್ ಬಾಲ ಗೋಕುಲ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಆ.30ರಂದು ಜೈ ಹನುಮಾನ್ ಭಜನಾ ಮಂದಿರದಲ್ಲಿ ನಡೆಯಿತು.

ಉದ್ಘಾಟನೆಯನ್ನು ಸ್ಥಳೀಯ ಪ್ರಗತಿಪರ ಕೃಷಿಕ ಶಿವಾಜಿ ಭಟ್ ರವರು ಉದ್ಘಾಟಿಸಿ ಮಕ್ಕಳಿಗೆ ಸಂಸ್ಕಾರ ಶಿಸ್ತಿನ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸೇವಾ ಪ್ರಮುಖರಾದ ವಿಜಯ್ ಅರಳಿ ಇವರು ಬಾಲಗೋಕುಲದ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು. ಮಕ್ಕಳಿಗೆ ಭೌತಿಕವನ್ನು ನೀಡಿದರು. ಜೈ ಹನುಮಾನ್ ಭಜನಾ ಮಂದಿರದ ಅಧ್ಯಕ್ಷ ಶರತ್ ಹಟ್ಟತೋಡಿ ಶುಭ ಹಾರೈಸಿದರು. ಜೈ ಹನುಮಾನ್ ಮಹಿಳಾದ ಜನ ಮಂಡಳಿಯ ಅಧ್ಯಕ್ಷ ಭಾರತಿ ಗಿರೀಶ್ ಶ್ರೀರಾಜರಾಮ್ ಪುರಿಯ ಇವರು ಉಪಸ್ಥಿತರಿದ್ದರು.

ಜೈ ಹನುಮಾನ್ ಭಜನಾ ಮಂಡಳಿಯ ಸದಸ್ಯರು ಮಕ್ಕಳ ಪೋಷಕರು, ಕುಕ್ಕಳದ ಮಾತಾಜಿಯವರಾದ ಅಮಿತ ಮತ್ತು ವಿದ್ಯಾ ಇವರು ಮಕ್ಕಳಿಗೆ ಓಂಕಾರ, ಪ್ರಾರ್ಥನೆ ಶ್ಲೋಕ ವನ್ನು ಹೇಳಿಕೊಟ್ಟರು. ಒಟ್ಟು 42 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೈ ಹನುಮಾನ್ ಬಾಲ ಗೋಕುಲ ಸಮಿತಿಯ ಮಾತಾಜಿ ಉಮಾ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.

Related posts

ಗೇರುಕಟ್ಟೆ ಪ್ರೌಢ ಶಾಲಾ ಸಮೀಪ ಡೆಂಗ್ಯೂ, ಮಲೇರಿಯಾ ಹರಡುವ ಕೇಂದ್ರ ಸೃಷ್ಟಿ

Suddi Udaya

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ವೇಣೂರು ಸರ್ಕಾರಿ ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಪದಗ್ರಹಣ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

Suddi Udaya

ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ: ವಾಣಿ ಆಂ.ಮಾ.ಪ್ರೌ. ಶಾಲೆಗೆ ರನ್ನರ್‍ಸ್ ಚಾಂಪಿಯನ್ ಮತ್ತು ಹಲವು ಪ್ರಶಸ್ತಿಗಳು

Suddi Udaya

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya
error: Content is protected !!