
ಪುಂಜಾಲಕಟ್ಟೆ: ಶ್ರೀ ಜೈ ಹನುಮಾನ್ ಬಾಲ ಗೋಕುಲ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಆ.30ರಂದು ಜೈ ಹನುಮಾನ್ ಭಜನಾ ಮಂದಿರದಲ್ಲಿ ನಡೆಯಿತು.

ಉದ್ಘಾಟನೆಯನ್ನು ಸ್ಥಳೀಯ ಪ್ರಗತಿಪರ ಕೃಷಿಕ ಶಿವಾಜಿ ಭಟ್ ರವರು ಉದ್ಘಾಟಿಸಿ ಮಕ್ಕಳಿಗೆ ಸಂಸ್ಕಾರ ಶಿಸ್ತಿನ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸೇವಾ ಪ್ರಮುಖರಾದ ವಿಜಯ್ ಅರಳಿ ಇವರು ಬಾಲಗೋಕುಲದ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು. ಮಕ್ಕಳಿಗೆ ಭೌತಿಕವನ್ನು ನೀಡಿದರು. ಜೈ ಹನುಮಾನ್ ಭಜನಾ ಮಂದಿರದ ಅಧ್ಯಕ್ಷ ಶರತ್ ಹಟ್ಟತೋಡಿ ಶುಭ ಹಾರೈಸಿದರು. ಜೈ ಹನುಮಾನ್ ಮಹಿಳಾದ ಜನ ಮಂಡಳಿಯ ಅಧ್ಯಕ್ಷ ಭಾರತಿ ಗಿರೀಶ್ ಶ್ರೀರಾಜರಾಮ್ ಪುರಿಯ ಇವರು ಉಪಸ್ಥಿತರಿದ್ದರು.

ಜೈ ಹನುಮಾನ್ ಭಜನಾ ಮಂಡಳಿಯ ಸದಸ್ಯರು ಮಕ್ಕಳ ಪೋಷಕರು, ಕುಕ್ಕಳದ ಮಾತಾಜಿಯವರಾದ ಅಮಿತ ಮತ್ತು ವಿದ್ಯಾ ಇವರು ಮಕ್ಕಳಿಗೆ ಓಂಕಾರ, ಪ್ರಾರ್ಥನೆ ಶ್ಲೋಕ ವನ್ನು ಹೇಳಿಕೊಟ್ಟರು. ಒಟ್ಟು 42 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೈ ಹನುಮಾನ್ ಬಾಲ ಗೋಕುಲ ಸಮಿತಿಯ ಮಾತಾಜಿ ಉಮಾ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.












