28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಕುತ್ಲೂರಿನಲ್ಲಿ 12ನೇ ವರ್ಷದ ಗಣೇಶೋತ್ಸವ ಸಂಭ್ರಮ: ರಾಷ್ಟ್ರಮಟ್ಟದ ಬೆಳ್ಳಿ ಪದಕ ವಿಜೇತ ನಿಶ್ಕ್ ಹರೀಶ್ ಸಾಲ್ಯಾನ್ ಸೇರಿದಂತೆ ಐವರು ಸಾಧಕರಿಗೆ ಸನ್ಮಾನ

ಕುತ್ಲೂರು: ಕುತ್ಲೂರಿನಲ್ಲಿ 12ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಕ್ರೀಡೆ, ವೈದ್ಯಕೀಯ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರನ್ನು ಗುರುತಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ನಿಶ್ಕ್ ಹರೀಶ್ ಸಾಲ್ಯಾನ್ – ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಐಸ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದು ಕುತ್ಲೂರಿಗೆ ಕೀರ್ತಿ ತಂದಿದ್ದಾರೆ. ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ 50ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾರೆ.

ಡಾ. ಪ್ರಸಾದ್ ಬಿ. ಶೆಟ್ಟಿ ಅವರನ್ನು ವೈದ್ಯಕೀಯ ಸೇವೆಯಲ್ಲಿನ ಸಾಧನೆ ಹಾಗೂ ಸಮಾಜಮುಖಿ ಕೊಡುಗೆಗಾಗಿ, ಡಾ. ದೀಕ್ಷಿತಾ ಅವರನ್ನು ವೈದ್ಯಕೀಯ ಜ್ಞಾನ, ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಸೇವಾ ಮನೋಭಾವಕ್ಕಾಗಿ, ಶ್ರೀಮತಿ ಶಾರದಾ ತುಳುನಾಡ್ ಅವರನ್ನು ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಕೊಡುಗೆಗಾಗಿ ಹಾಗೂ ಶ್ರೀಮತಿ ಶ್ವೇತಾ ದಿಲೀಪ್ ಕುತ್ಲೂರು ಅವರನ್ನು ಸಾಹಿತ್ಯ, ಸಮಾಜಸೇವೆ ಮತ್ತು ಧಾರ್ಮಿಕ ಜಾಗೃತಿಯ ಕ್ಷೇತ್ರಗಳಲ್ಲಿನ ಸೇವೆಗಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಣ್ಣ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಭೋಜಪ್ಪ ಗೌಡ ಸುಳ್ಕೇರಿ ಮೊಗ್ರು, ಶ್ರೀ ಕೆ. ಶಶಿಕಾಂತ್ ಅರಿಗ ಹಾಗೂ ಶ್ರೀ ಸತೀಶ್ ಪಡಿವಾಳ್ ಉಪಸ್ಥಿತರಿದ್ದರು.

ಸುಶ್ಮಿತಾ, ಶ್ರೀಶಾ, ಸಿಂಚನ ಪ್ರಾರ್ಥಿಸಿದರು. ಜಯನಂದ ದೇವಾಡಿಗ ಸ್ವಾಗತಿಸಿದರು. ಹರೀಶ್, ಶ್ರೀ ಹರ್ಷ ವಂದಿಸಿದರು. ಸತೀಶ್, ಸಮೃದ್ಧಿ ನಿರೂಪಿಸಿದರು. ಸನ್ಮಾನಿತರ ಪರವಾಗಿ ಡಾ. ಪ್ರಸಾದ್ ಬಿ. ಶೆಟ್ಟಿ ಅವರು ಮಾತನಾಡಿದರು.

Related posts

ಬೆಳಾಲಿನಲ್ಲಿ ಎಸ್ ಡಿ ಎಂ ಎನ್ ಎಸ್ ಎಸ್ ಶಿಬಿರದ ಸಮಾರೋಪ

Suddi Udaya

ಉಪ್ಪಿನಂಗಡಿ – ಮಡಂತ್ಯಾರು ಮಾರ್ಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಿಡುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಎಸ್‌ಡಿಪಿಐ ನಿಯೋಗ

Suddi Udaya

ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತೆನೆ ಹಬ್ಬ

Suddi Udaya

ಬಂದಾರು-ಕೊಕ್ಕಡ ಗ್ರಾಮವನ್ನು ಬೆಸೆಯುವ ಮೈಪಾಲ ಸೇತುವೆ ಕಾಮಗಾರಿ ವೀಕ್ಷಿಸಿದ ಶಾಸಕ ಹರೀಶ್ ಪೂಂಜ

Suddi Udaya

ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಂದ ಮೊದಲ ದಿನವೇ 6 ಮೆಗಾ ಗ್ಯಾರಂಟಿ: ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್- ಯುವ ಜನರಿಗೆ ಉದ್ಯೋಗ ಗ್ಯಾರಂಟಿ- ಜೋಡೋ ಯುವ ಸಂಘ ರಚನೆ

Suddi Udaya

ನಾಲ್ಕೂರು: ಅಸೌಖ್ಯದಿಂದ ಯೈಕುರಿ ವಸಂತಿ ನಿಧನ

Suddi Udaya
error: Content is protected !!