September 19, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ತುಳು ಭಾಷೆಗೆ ಐತಿಹಾಸಿಕ ಗೌರವ: ರಾಜ್ಯ ಸರ್ಕಾರದ ಸರ್ವ ಶ್ರೇಷ್ಠ ಸಾಧನೆ-ಸಂತೋಷ್ ಕುಮಾರ್

ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆದಿದ್ರಾವಿಡ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮುಖ್ಯಮಂತ್ರಿ ‌ಡಿ. ಕೆ. ಘೋಷಿಸಿರುವುದು ಈ ಸರಕಾರದ ಸರ್ವ ಶ್ರೇಷ್ಠ ‌ಸಾಧನೆ ಹಾಗೂ ಐತಿಹಾಸಿಕ ನಿರ್ಧಾರ,ತುಳುನಾಡಿನ ಭವ್ಯ ಪರಂಪರೆಯನ್ನು ರಾಜ್ಯ ಸರಕಾರ ಎತ್ತಿ ಹಿಡಿದಿದೆ. ಈ ಮೂಲಕ ಕರಾವಳಿಯ ಕಲೆ, ಜಾನಪದ, ಸಂಸ್ಕೃತಿ ಹಾಗೂ ಇಲ್ಲಿನ ಭಾಷೆಗೆ ಅಧಿಕೃತ ಮನ್ನಣೆ ದೊರೆತಿರುವುದು ಸಂತೋಷದ ವಿಚಾರ. ಈ ಮಹತ್ತರ ಕಾರ್ಯವನ್ನು ‌ಮಾಡಿದ ಮುಖ್ಯಮಂತ್ರಿಗಳಿಗೆ‌ ಅಭಿನಂದನೆಗಳು. ಅದೇ ರೀತಿ‌ ಪುತ್ತೂರು, ಕನ್ಯಾಡಿ ಸೇರಿದಂತೆ ಕರಾವಳಿಯ ಧಾರ್ಮಿಕ ‌ಕ್ಷೇತ್ರಗಳ ಅಭಿವೃದ್ಧಿಗೂ‌ ಕೋಟಿ ವೆಚ್ಚದ ಅನುದಾನಗಳನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಬದ್ಧತೆ‌ ಪ್ರದರ್ಶಿಸಿದೆ. ವಿಶೇಷ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ತುಳುನಾಡಿನ ಜನರ ಭಾವನೆಗಳಿಗೆ ಸಕಾಲದಲ್ಲಿ ಸ್ಪಂದಿಸಿದೆ. ಈ ಮೂಲಕ ಜಗತ್ತಿನ ಮೂಲೆ‌ ಮೂಲೆಯಲ್ಲಿರುವ ತುಳುವರು, ತುಳು ಭಾಷೆಯನ್ನು ಮಾತನಾಡುವವರು, ಸಾಹಿತಿಗಳು, ಸಂಘ ಸಂಸ್ಥೆಗಳ ಸದಸ್ಯರು, ಕರಾವಳಿ ಪ್ರಾಂತ್ಯದ ಜನತೆ ಸಂತಸ ಪಡುವಂತಾಗಿದೆ. ಸೌಹಾರ್ದತೆಯ ಸ್ಥಾನ, ದೇವಾಲಯಗಳ ಬೀಡಾದ ಕರಾವಳಿಯ ಸರ್ವರೂ ಮುಖ್ಯಮಂತ್ರಿಗಳ‌ ಈ ಕಾರ್ಯವನ್ನು ಶ್ಲಾಘಿಸಬೇಕಿದೆ ಎಂದು ದ.ಕ. ಜಿಲ್ಲಾ ಕೆ.ಡಿ.ಪಿ. ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲಾ ಹೇಳಿಕೆ ನೀಡಿದ್ದಾರೆ.

Related posts

ಕರ್ನಾಟಕ ದಲಿತ ಚಳುವಳಿಗೆ 50ರ ಸಂಭ್ರಮ: ಎ.28 ಬೆಳ್ತಂಗಡಿಯಲ್ಲಿ 50 ರ ಸಂಭ್ರಮ ಸಮಾವೇಶ- ದಲಿತ ಸಾಂಸ್ಕೃತಿಕ ವೈವಿಧ್ಯ

Suddi Udaya

ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಆರೋಪ : ಇಬ್ಬರ ವಿರುದ್ಧ ಪ್ರತಿದೂರು ದಾಖಲು

Suddi Udaya

ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

Suddi Udaya

ಕಾಯರ್ತಡ್ಕ ಪ್ರೌಢಶಾಲೆಗೆ ಶೌಚಾಲಯ ಹಸ್ತಾಂತರ

Suddi Udaya

ಬಾರ್ಯ : ಪೆರಿಯಟ್ಟು ಸ.ಹಿ.ಪ್ರಾ. ಶಾಲೆಯಲ್ಲಿ ಪರಿಸರ ಮಾಹಿತಿ, ಗಿಡ ನಾಟಿ ಕಾರ್ಯಕ್ರಮ

Suddi Udaya

ಕರ್ನಾಟಕ ರಾಜ್ಯ ದಲಿತ ಹಕ್ಕು ಸಮಿತಿಯ ರಾಜ್ಯ ಸಮಿತಿಗೆ ಈಶ್ವರಿ ಪದ್ಮುಂಜ ಆಯ್ಕೆ

Suddi Udaya
error: Content is protected !!