April 2, 2025
ಕರಾವಳಿಕ್ರೀಡಾ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿರಾಜ್ಯ ಸುದ್ದಿ

ತನ್ನ ಹೋಟೆಲ್ ಗೆ ಕಂಬಳ ಓಟದ ಪ್ರಸಿದ್ಧ ” ಕೋಣ ತಾಟೆ” ಹೆಸರಿಟ್ಟ ಮಾಲೀಕ

ಮಂಗಳೂರು: ನಾವೆಲ್ಲ ಅಭಿಮಾನಿಗಳು ಅವರ ನೆಚ್ಚಿನ ತಾರೆಯರಿಗೆ ಟೆಂಪಲ್ ಕಟ್ಟೋದು, ಅವರ ಹೆಸರುಗಳನ್ನು ತಮ್ಮ ಮನೆಗಳಿಗೆ, ಅಂಗಡಿಗಳಿಗೆ ಇಡೋದು ಇಲ್ಲಾ ಮಕ್ಕಳಿಗೆ ಅವರದ್ದೇ ಹೆಸರಿಡೋದನ್ನು ನೋಡಿದ್ದೇವೆ.ಆದ್ರೆ ಇಲ್ಲೊಬ್ಬ ಕಂಬಳ ಅಭಿಮಾನಿ ತನ್ನ ಹೋಟೆಲ್ ಗೆ ಕಂಬಳ ಕೋಣದ ಹೆಸರಿಟ್ಟು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಹೌದು ಕಂಬಳ ಲೋಕದ ಕಿಂಗ್ ಎಂದು ಗುರುತಿಸಿಕೊಂಡಿರುವ ಕೋಣ ತಾಟೆಗೆ ಕಂಬಳದ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ಗೆ ಅದರ ಹೆಸರನ್ನು ಇಡುವ ಮೂಲಕ ಗೌರವ ಅರ್ಪಿಸಿದ್ದಾರೆ. ಪಾಣೆ ಮಂಗಳೂರಿನಿಂದ 2 ಕಿಲೋಮೀಟರ್ ದೂರದ ಶಂಭೂರು ಗ್ರಾಮದಲ್ಲಿ ಊಟದ ಹೋಟೆಲ್‌ಗೆ ‘ಇರುವೈಲ್ ತಾಟೆ’ ಎಂದು ಹೆಸರಿಡಲಾಗಿದೆ.

ಕಂಬಳ ಅಭಿಮಾನಿಯಾಗಿರುವ ಜಯಂತ್ ಅಂಚನ್ ಅವರು ತಮ್ಮ ‘ಶಿವ ಶಕ್ತಿ’ ಫಾಸ್ಟ್ ಫುಡ್ ಕೇಂದ್ರವನ್ನು ಹೋಟೆಲ್ ಆಗಿ ಪರಿವರ್ತಿಸಿದ್ದು ಇದಕ್ಕೆ ಕಂಬಳಕ್ಕೆ ಸಂಬಂಧಿಸಿದ ಹೆಸರು ಇರಿಸಿದ್ದಾರೆ. ಜಯಂತ್ ಅಪ್ಪಟ ಕಂಬಳ ಅಭಿಮಾನಿಯಾಗಿದ್ದು, ಜಿಲ್ಲೆಯಲ್ಲಿ ಎಲ್ಲೇ ಕಂಬಳ ನಡೆದರೂ ಕೂಡ ಜಯಂತ್ ಅಲ್ಲಿರುತ್ತಾರೆ. ಹೀಗಿರುವಾಗ 8 ವರ್ಷಗಳ ಹಿಂದೆ ‘ತಾಟೆ’ ಅವರ ಕಣ್ಣಿಗೆ ಬಿದ್ದಿದೆ. ಅದರ ಓಟದ ಪರಿಗೆ ಫಿದಾ ಆದ ಅವರು ಕ್ರಮೇಣ ಅದರ ಅಭಿಮಾನಿಯಾದರು. ಈ ಪ್ರೀತಿ ಹೋಟೆಲ್ ಹೆಸರಿನ ರೂಪದಲ್ಲಿ ವ್ಯಕ್ತವಾಗಿದೆ
‘ತಾಟೆ ಅಪ್ರತಿಮ ಓಟಗಾರ, ಕಂಬಳದಲ್ಲಿ ಎರಡು ಕೋಣಗಳು ಜೊತೆಯಾಗಿ ಓಡುತ್ತವೆ. ಸಾಮಾನ್ಯವಾಗಿ ಅವೆರಡೂ ಜೊತೆಯಾಗಿ ಅಂತಿಮ ಗೆರೆಯತ್ತ ಧಾವಿಸುತ್ತವೆ. ಆದರೆ ತಾಟೆ ತನ್ನ ಜೊತೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತದೆ. ಹೀಗಾಗಿ ಅದರ ಫಿನಿಶಿಂಗ್ ನೋಡುವುದು ಕಣ್ಣಿಗೆ ಆನಂದ. ಅದರ ಓಟವನ್ನು ನೋಡುತ್ತ ನೋಡುತ್ತ ಅಭಿಮಾನಿಯಾದೆ. ಹೋಟೆಲ್‌ಗೆ ಆ ಕೋಣದ ಹೆಸರಿಡಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ.

Related posts

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ

Suddi Udaya

ಕುಂಟಿನಿಯ ಕಾಂಗ್ರೆಸ್ ಬೂತ್ ಸಮಿತಿಯ ಮನವಿಗೆ ಸ್ಪಂದನೆ: ಹಳೆಪೇಟೆಯಿಂದ ಕುತ್ರೋಟ್ಟು ರಸ್ತೆ ದುರಸ್ತಿ ಆರಂಭ

Suddi Udaya

ಅಸೌಖ್ಯದಿಂದ ಬಳಲಿ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನ.ಪಂ ಉಪಾಧ್ಯಕ್ಷ ಮತ್ತಿತರರು

Suddi Udaya

ಅಂಡಿಂಜೆ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಕಿರು ಸೇತುವೆ, ಸಂಪರ್ಕ ಸ್ಥಗಿತ

Suddi Udaya

ತಾಲೂಕು ಮಟ್ಟದ ಕ್ರೀಡಾಕೂಟ : ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಉಜಿರೆಯಿಂದ ಪೆರಿಯಶಾಂತಿಯ ರಸ್ತೆ ಕಾಮಗಾರಿ ಕೇಂದ್ರದ ಯೋಜನೆ ಮುಗ್ರೋಡಿ ಕನ್ಸ್ ಟ್ರಕ್ಷನ್ ಗೆ ಟೆಂಡರ್

Suddi Udaya
error: Content is protected !!