26.9 C
ಪುತ್ತೂರು, ಬೆಳ್ತಂಗಡಿ
April 24, 2026
ಕರಾವಳಿಕ್ರೀಡಾ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿರಾಜ್ಯ ಸುದ್ದಿ

ತನ್ನ ಹೋಟೆಲ್ ಗೆ ಕಂಬಳ ಓಟದ ಪ್ರಸಿದ್ಧ ” ಕೋಣ ತಾಟೆ” ಹೆಸರಿಟ್ಟ ಮಾಲೀಕ

ಮಂಗಳೂರು: ನಾವೆಲ್ಲ ಅಭಿಮಾನಿಗಳು ಅವರ ನೆಚ್ಚಿನ ತಾರೆಯರಿಗೆ ಟೆಂಪಲ್ ಕಟ್ಟೋದು, ಅವರ ಹೆಸರುಗಳನ್ನು ತಮ್ಮ ಮನೆಗಳಿಗೆ, ಅಂಗಡಿಗಳಿಗೆ ಇಡೋದು ಇಲ್ಲಾ ಮಕ್ಕಳಿಗೆ ಅವರದ್ದೇ ಹೆಸರಿಡೋದನ್ನು ನೋಡಿದ್ದೇವೆ.ಆದ್ರೆ ಇಲ್ಲೊಬ್ಬ ಕಂಬಳ ಅಭಿಮಾನಿ ತನ್ನ ಹೋಟೆಲ್ ಗೆ ಕಂಬಳ ಕೋಣದ ಹೆಸರಿಟ್ಟು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಹೌದು ಕಂಬಳ ಲೋಕದ ಕಿಂಗ್ ಎಂದು ಗುರುತಿಸಿಕೊಂಡಿರುವ ಕೋಣ ತಾಟೆಗೆ ಕಂಬಳದ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ಗೆ ಅದರ ಹೆಸರನ್ನು ಇಡುವ ಮೂಲಕ ಗೌರವ ಅರ್ಪಿಸಿದ್ದಾರೆ. ಪಾಣೆ ಮಂಗಳೂರಿನಿಂದ 2 ಕಿಲೋಮೀಟರ್ ದೂರದ ಶಂಭೂರು ಗ್ರಾಮದಲ್ಲಿ ಊಟದ ಹೋಟೆಲ್‌ಗೆ ‘ಇರುವೈಲ್ ತಾಟೆ’ ಎಂದು ಹೆಸರಿಡಲಾಗಿದೆ.

ಕಂಬಳ ಅಭಿಮಾನಿಯಾಗಿರುವ ಜಯಂತ್ ಅಂಚನ್ ಅವರು ತಮ್ಮ ‘ಶಿವ ಶಕ್ತಿ’ ಫಾಸ್ಟ್ ಫುಡ್ ಕೇಂದ್ರವನ್ನು ಹೋಟೆಲ್ ಆಗಿ ಪರಿವರ್ತಿಸಿದ್ದು ಇದಕ್ಕೆ ಕಂಬಳಕ್ಕೆ ಸಂಬಂಧಿಸಿದ ಹೆಸರು ಇರಿಸಿದ್ದಾರೆ. ಜಯಂತ್ ಅಪ್ಪಟ ಕಂಬಳ ಅಭಿಮಾನಿಯಾಗಿದ್ದು, ಜಿಲ್ಲೆಯಲ್ಲಿ ಎಲ್ಲೇ ಕಂಬಳ ನಡೆದರೂ ಕೂಡ ಜಯಂತ್ ಅಲ್ಲಿರುತ್ತಾರೆ. ಹೀಗಿರುವಾಗ 8 ವರ್ಷಗಳ ಹಿಂದೆ ‘ತಾಟೆ’ ಅವರ ಕಣ್ಣಿಗೆ ಬಿದ್ದಿದೆ. ಅದರ ಓಟದ ಪರಿಗೆ ಫಿದಾ ಆದ ಅವರು ಕ್ರಮೇಣ ಅದರ ಅಭಿಮಾನಿಯಾದರು. ಈ ಪ್ರೀತಿ ಹೋಟೆಲ್ ಹೆಸರಿನ ರೂಪದಲ್ಲಿ ವ್ಯಕ್ತವಾಗಿದೆ
‘ತಾಟೆ ಅಪ್ರತಿಮ ಓಟಗಾರ, ಕಂಬಳದಲ್ಲಿ ಎರಡು ಕೋಣಗಳು ಜೊತೆಯಾಗಿ ಓಡುತ್ತವೆ. ಸಾಮಾನ್ಯವಾಗಿ ಅವೆರಡೂ ಜೊತೆಯಾಗಿ ಅಂತಿಮ ಗೆರೆಯತ್ತ ಧಾವಿಸುತ್ತವೆ. ಆದರೆ ತಾಟೆ ತನ್ನ ಜೊತೆಯನ್ನು ಹಿಂದಿಕ್ಕಿ ಮುನ್ನುಗ್ಗುತ್ತದೆ. ಹೀಗಾಗಿ ಅದರ ಫಿನಿಶಿಂಗ್ ನೋಡುವುದು ಕಣ್ಣಿಗೆ ಆನಂದ. ಅದರ ಓಟವನ್ನು ನೋಡುತ್ತ ನೋಡುತ್ತ ಅಭಿಮಾನಿಯಾದೆ. ಹೋಟೆಲ್‌ಗೆ ಆ ಕೋಣದ ಹೆಸರಿಡಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ.

Related posts

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 101 ಎಳನೀರು ಅಭಿಷೇಕ, ನವಕ ಕಲಶ ಅಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ : ಕೀರ್ತಿಶೇಷ ಪ್ರೊ. ಎನ್. ಜಿ. ಪಟವರ್ಧನ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಚಾರ ಸಂಕಿರಣ

Suddi Udaya

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ತರಭೇತಿ ಕಾರ್ಯಾಗಾರ

Suddi Udaya

ಉಜಿರೆ ಎಸ್. ಡಿ.ಎಂ ಆಂ.ಮಾ. ಶಾಲೆ ಕಿಂಡರ್ಗಾರ್ಟನ್ ಗೆ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ನಿಶ್ಚಲ್ ಕುಮಾರ್ ಭೇಟಿ

Suddi Udaya

ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ರಸಪ್ರಶ್ನೆ ಕ್ವಿಜ್ ಸ್ಪರ್ಧೆ: ಮೈರೋಳ್ತಡ್ಕ ಸ.ಉ.ಪ್ರಾ. ಶಾಲೆಯ ವಿದ್ಯಾರ್ಥಿನಿ ಕು. ಮನ್ವಿ.ಕೆ. ಆರ್ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ

Suddi Udaya

ಯೂಟ್ಯೂಬರ್ಸ್ ಹಾಗೂ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಆರೋಪ: ಸ್ಥಳದಲ್ಲಿ ಜನ ಜಮಾಯಿಸಿ ಉದ್ವಿಗ್ನ ಸ್ಥಿತಿ- ಪೊಲೀಸರಿಂದ ಲಾಠಿ ಚಾರ್ಜ್. ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ: ಎಸ್.ಪಿ

Suddi Udaya
error: Content is protected !!