July 23, 2026
ಗ್ರಾಮಾಂತರ ಸುದ್ದಿ

ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆ
ಶಾಸಕ ಹರೀಶ್ ಪೂಂಜರಿಗೆ ದೈವದ ಅಭಯ

ಉಜಿರೆ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರಿಗೆ ರಾಜನ್ ದೈವ ಜುಮಾದಿ ಬಂಟ ನೀಡಿರುವ ಅಭಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಉಜಿರೆ ಗ್ರಾಮ ಪಂಚಾಯತ್‌ಉಪಾಧ್ಯಕ್ಷ ರವಿಕುಮಾರ್ ಬರೆಮೇಲುರವರ ಮನೆಯಲ್ಲಿ ಜ.6ರಂದು ನಡೆದ ಧರ್ಮ ದೈವಗಳ ನೇಮೋತ್ಸವದ ವೇಳೆ ರಾಜನ್ ದೈವ ಜುಮಾದಿ ಬಂಟನ ನುಡಿಕಟ್ಟಿನ ವೇಳೆ ಶಾಸಕ ಹರೀಶ್ ಪೂಂಜ ಆಗಮಿಸಿದ್ದರು. ಈ ವೇಳೆ ಪ್ರಸಾದ ನೀಡುವಾಗ ಊರಿನ ಅರಸ ಅಂತ ಶಾಸಕರನ್ನು ಸಂಬೋಧಿಸಿದ ದೈವ ಪಟ್ಟದಲ್ಲಿ ಕೂರಿಸಿದ್ದೇನೆ,ಇದ್ರಿಂದ ಕೆಳಗೆ ಇಳಿಯಲು ಬಿಡುವುದಿಲ್ಲ, ಇನ್ನೂ ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆಂದು ಅಭಯ ನೀಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೈವದ ಅಭಯದ ನುಡಿ:
ನೆನಪಂದೆ ಪಟ್ಟೊಡು ಕುಲ್ಲದೆ,ಉಂದೆನ್ ನನ ತಿರ್ತ್ ಜಪ್ಪರೆ ಬುಡ್ಪುಜಿ. ಈ ಕಾಲೋಗು ಕಂಬುಲಗ್ ಜೈದರ್ ಮಂಜೊಟ್ಟಿಗ್ ಯಾನ್ ಎತ್ತವೆ. ಮಂಜೋಟ್ಟಿಗ್ ಎತ್ತದ್ ಇತ್ತೆ ಕುಲ್ದುನ ಸ್ಥಾನಮಾನೋರ್ದು ಏರಿಕೆದ ಸ್ಥಾನಡ್ ಕುಲ್ಲದ್, ಮೂಡಾಯಿ ಕ್ಷೇತ್ರೋಗು ಬೋಡಾಪುನ ಅರಸುಂದ್ ಪನ್ಪವೆ.
(ಹಿಂದಿನ ಬಾರಿ ಪಟ್ಟದಲ್ಲಿ ಕೂರಿಸಿದ್ದೇನೆ,ಇಲ್ಲಿಂದ ಕೆಳಗೆ ಇಳಿಯಲು ನಾನು ಬಿಡುವುದಿಲ್ಲ.ಈ ಸಲ ಮತ್ತೆ ಕಂಬಳಕ್ಕೆ ಇಳಿದಿದ್ದೀರಿ, ಮಂಜೊಟ್ಟಿಗೆ (ಕಂಬಳ ಕೋಣ ಗುರಿ ಮುಟ್ಟುವ ಸ್ಥಳ)ನಾನು ತಲುಪಿಸುತ್ತೇನೆ. ಅಷ್ಟೇ ಅಲ್ಲ ಈಗಿರುವ ಸ್ಥಾನಕ್ಕಿಂತ ಮೇಲಿನ ಸ್ಥಾನದಲ್ಲಿ ಕುಳ್ಳಿರಿಸಿ, ಮೂಡಾಯಿ ಕ್ಷೇತ್ರಕ್ಕೆ ಬೇಕೇ ಬೇಕಾದ ಅರಸ ಅಂತ ಹೇಳಿಸುತ್ತೇನೆ )
ಎಂದು ದೈವ ನೀಡಿದ ಅಭಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related posts

ಸುಲ್ಕೇರಿ ಶ್ರೀರಾಮ ಶಿಶು ಮಂದಿರ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆಯಲ್ಲಿ ಸಾಂಸ್ಕೃತಿಕ ವೈಭವ

Suddi Udaya

ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ಮನೆಯಂಗಳದಲ್ಲಿ ನಿಂತಿದ್ದ ಕನ್ಯಾಡಿ ಅಂಡಿರ್‌ಮಾರ್ ನಿವಾಸಿ ಮಂಜಪ್ಪ ನಾಯ್ಕರ ಮೇಲೆ ಚಿರತೆ ದಾಳಿ: ಕಾಲಿಗೆ ಕಚ್ಚಿ ಗಂಭೀರ ಗಾಯ- ಬೆಳ್ತಂಗಡಿ ಆಸ್ಪತ್ರೆಗೆ ದಾಖಲು

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಾಲು ಎಸ್.ಡಿ.ಎಂ. ಅ. ಪ್ರೌಢಶಾಲೆಗೆ ಶೇ. 93.54 ಫಲಿತಾಂಶ

Suddi Udaya

ಪಾಂಡವರಕಲ್ಲು : ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಧರ್ಮಸ್ಥಳದಲ್ಲಿ ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ

Suddi Udaya
error: Content is protected !!