July 23, 2026
ಅಪರಾಧ ಸುದ್ದಿ

ಕಾಡು ಪ್ರಾಣಿಗಳನ್ನು ಹೆದರಿಸಲು ಕೋವಿಯಿಂದ ಹಾರಿಸಿದ ಗುಂಡು ತಾಗಿ ಗಂಭೀರ ಗಾಯ

ನಿಡ್ಲೆ : ಕಾಡು ಪ್ರಾಣಿಗಳನ್ನು ಹೆದರಿಸಲು ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ ಪರಿಣಾಮ ಆಕಸ್ಮಿಕ ವಾಗಿ ಗುಂಡು ತಾಗಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ನೂಜಿಲ ಎಂಬಲ್ಲಿ ಮಾ.2ರಂದು ನಡೆಯಿತು.

ನಿಡ್ಲೆ ಗ್ರಾಮದ ನೂಜಿಲ ಮನೆ ದಿ. ರಾಮಣ್ಣ ಗೌಡರ ಪುತ್ರ ಡೀಕಯ್ಯ ( 41 ವರ್ಷ) ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರ ಸಹೋದರ ಲಕ್ಷ್ಮಣ ಗೌಡ ಕೋವಿಯಿಂದ ಗುಂಡು ಹಾರಿಸಿದವರಾಗಿದ್ದು, ಇವರ ಮೇಲೆ ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ಮಾ. 02ರಂದು ರಾತ್ರಿ ಡೀಕಯ್ಯ ಗೌಡ ಅವರು ಅಣ್ಣನಾದ ಲಕ್ಷ್ಮಣ ಗೌಡರವರ ಮನೆಗೆ ಬಂದಿದ್ದರು., ರಾತ್ರಿ 8.30 ಗಂಟೆಯ ವೇಳೆಗೆ ನಾಯಿಗಳು ಎಡಬಿಡದೇ ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರಾವನಣಿಗೆ ಹೊಂದಿರುವ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ,
ಡೀಕಯ್ಯ ಗೌಡರು ಅಂಗಳದಲ್ಲಿ ನಿಂತಿರುವುದನ್ನು ಗಮನಿಸದೇ ಮನೆಯ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದರು.
ಈ ವೇಳೆ ಆಕಸ್ಮಿಕ ವಾಗಿ ಸಿಡಿಸಿದ ಚಿಕ್ಕ 2 ಗುಂಡುಗಳು ಡೀಕಯ್ಯರ ಬಲಕೈಗೆ ಮತ್ತು ಎಡಕಾಲಿಗೆ ತಾಗಿ ಗಾಯವಾಗಿದ್ದು, ಅವರನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

Related posts

ದಿಡುಪೆ ಜಲಪಾತ ವೀಕ್ಷಣೆಗೆ ಬಂದಿದ್ದವರನ್ನು ತಡೆದು ಜೀವಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಕಾಸರಗೋಡು ಮೂಲದ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Suddi Udaya

ಕರಿಮಣೇಲಿನ ಯುವತಿ ನಾಪತ್ತೆ: ಪೊಲೀಸ್ ದೂರು ದಾಖಲು

Suddi Udaya

ಬೆಳ್ತಂಗಡಿ: ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಗ್ಯಾಸ್ ಸಿಲಿಂಡ‌ರ್ ನೀಡಲು ನಿರಾಕರಣೆ ಮಾಡಿದ ವಿತರಕನ ಮೇಲೆ ಹಲ್ಲೆ: ಪ್ರಕರಣ ದಾಖಲು

Suddi Udaya

ಬೆಳ್ತಂಗಡಿಯ ಮೂರು ವಕೀಲರ ಕಚೇರಿಗೆ, ಒಂದು ಇಂಜಿನಿಯರ್ ಆಫೀಸ್‌ಗೆ ಕುಂಕುಮ ?

Suddi Udaya
error: Content is protected !!