24 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿ

ಕಾಡು ಪ್ರಾಣಿಗಳನ್ನು ಹೆದರಿಸಲು ಕೋವಿಯಿಂದ ಹಾರಿಸಿದ ಗುಂಡು ತಾಗಿ ಗಂಭೀರ ಗಾಯ

ನಿಡ್ಲೆ : ಕಾಡು ಪ್ರಾಣಿಗಳನ್ನು ಹೆದರಿಸಲು ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ ಪರಿಣಾಮ ಆಕಸ್ಮಿಕ ವಾಗಿ ಗುಂಡು ತಾಗಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ನೂಜಿಲ ಎಂಬಲ್ಲಿ ಮಾ.2ರಂದು ನಡೆಯಿತು.

ನಿಡ್ಲೆ ಗ್ರಾಮದ ನೂಜಿಲ ಮನೆ ದಿ. ರಾಮಣ್ಣ ಗೌಡರ ಪುತ್ರ ಡೀಕಯ್ಯ ( 41 ವರ್ಷ) ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರ ಸಹೋದರ ಲಕ್ಷ್ಮಣ ಗೌಡ ಕೋವಿಯಿಂದ ಗುಂಡು ಹಾರಿಸಿದವರಾಗಿದ್ದು, ಇವರ ಮೇಲೆ ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ಮಾ. 02ರಂದು ರಾತ್ರಿ ಡೀಕಯ್ಯ ಗೌಡ ಅವರು ಅಣ್ಣನಾದ ಲಕ್ಷ್ಮಣ ಗೌಡರವರ ಮನೆಗೆ ಬಂದಿದ್ದರು., ರಾತ್ರಿ 8.30 ಗಂಟೆಯ ವೇಳೆಗೆ ನಾಯಿಗಳು ಎಡಬಿಡದೇ ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರಾವನಣಿಗೆ ಹೊಂದಿರುವ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ,
ಡೀಕಯ್ಯ ಗೌಡರು ಅಂಗಳದಲ್ಲಿ ನಿಂತಿರುವುದನ್ನು ಗಮನಿಸದೇ ಮನೆಯ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದರು.
ಈ ವೇಳೆ ಆಕಸ್ಮಿಕ ವಾಗಿ ಸಿಡಿಸಿದ ಚಿಕ್ಕ 2 ಗುಂಡುಗಳು ಡೀಕಯ್ಯರ ಬಲಕೈಗೆ ಮತ್ತು ಎಡಕಾಲಿಗೆ ತಾಗಿ ಗಾಯವಾಗಿದ್ದು, ಅವರನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

Related posts

ನಿಡ್ಲೆ, ಕರಿಮಣೇಲು ಹಾಗೂ ಕನ್ಯಾಡಿ ಪಂಚಾಯತ್ ಮಟ್ಟದ ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ವರದಿ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ: ಮಂಗಳೂರು ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ

Suddi Udaya

ರಸ್ತೆ ಬದಿ ವಾಹನಕ್ಕಾಗಿ ತನ್ನ ತಾಯಿ ಜೊತೆ ಕಾಯುತ್ತಿದ್ದ ಪುಟ್ಟ ಬಾಲಕಿ ಸಾತ್ವಿಕಾ ದ್ವಿಚಕ್ರ ವಾಹನ ‌ ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ

Suddi Udaya

ಬಳಂಜ: ತಾಯಿ-ಮಗನಿಗೆ ಜೀವ ಬೆದರಿಕೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಕುತ್ಯಾರು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ಬೆಳ್ತಂಗಡಿ ಪೊಲೀಸ್ ರಿಂದ ತನಿಖೆ

Suddi Udaya

ಉಜಿರೆಯಲ್ಲಿ ಕುಶಾಲನಗರದ ವ್ಯಕ್ತಿಯ ಶವ ಪತ್ತೆ

Suddi Udaya

ತುಮಕೂರಿನಲ್ಲಿ ಕಾರಿಗೆ ಬೆಂಕಿ ಮೂವರ ಕೊಲೆ ಪ್ರಕರಣ: ತುಮಕೂರು ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳ ಬಂಧನ: ಮುರುಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು

Suddi Udaya
error: Content is protected !!