ಬೆಳ್ತಂಗಡಿ ಜೆಸಿಐ ಮಂಜುಶ್ರೀ ಮಹಿಳಾ ವಿಭಾಗದಿಂದ ಮೆಡಿಕಲ್ ಕ್ಯಾಂಪ್

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೆಡಿಕಲ್ ಕ್ಯಾಂಪ್ ಮಾ.7ರಂದು ಬೆಳ್ತಂಗಡಿ ಜೆಸಿಐ ಮಂಜುಶ್ರೀ ಮಹಿಳಾ ವಿಭಾಗದಿಂದ ಆಯೋಜಿಸಲಾಯಿತು.

ಪ್ರಸ್ತುತ ಕ್ಯಾನ್ಸರ್ ರೋಗವು ವ್ಯಾಪಾಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಏನೆಲ್ಲ ಪರಿಹಾರಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇಲ್ಲಿನ ಶುಶ್ರೂಷಕಿ ಶ್ರೀಮತಿ ಸುಭಾಷಿಣಿ ಮತ್ತು ತಂಡದವರು ಪ್ರತ್ಯಕ್ಷಿತೆ ಮುಖಾಂತರ ಸ್ನಾತಕೋತ್ತರ ವಿದ್ಯಾರ್ಥಿನೀಯರಿಗೆ ತಿಳಿಸಿಕೊಟ್ಟರು.

ಈ ಕಾರ್ಯಕ್ರಮ ದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷರಾದ ಜೆಸಿ ಶಂಕರ್ ರಾವ್, ಕಾರ್ಯದರ್ಶಿ ಜೆಸಿ ಸುಧೀರ್ ಕೆ. ಎನ್ ಮತ್ತು ಮಹಿಳಾ ವಿಭಾಗದ ಸಂಯೋಜಕಿ ಜೆಸಿ ಮಮಿತ ಸುಧೀರ್ ಉಪಸ್ಥಿತರಿದ್ದರು.

Leave a Comment

error: Content is protected !!