25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಕರಣೆ ಹಾಗೂ ನುಡಿನಮನ ಕಾರ್ಯಕ್ರಮ

ಬೆಳ್ತಂಗಡಿ:ಕೀರ್ತಿಶೇಷ ಬಲಿಪ ನಾರಾಯಣ ಭಾಗವತರು ಹಾಗೂ ಕೀರ್ತಿಶೇಷ ವಿಜಯ‌ರಾಘವ ಪಡ್ವೆಟ್ನಾಯರ ಸಂಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು “ಸಮೃದ್ಧಿ” ಕರಾಡ ಭವನ ಸೋಮಂತಡ್ಕದಲ್ಲಿ ಕರಾಡ ಬ್ರಾಹ್ಮಣ‌ ಸಮಾಜ (ರಿ),ಬೆಳ್ತಂಗಡಿ ಇದರ ವತಿಯಿಂದ ಹಮ್ಮಿಕೊಳ್ಳಲಾಯಿತು. ಯಕ್ಷಗಾನದ ಧ್ರುವತಾರೆ ಕಂಚಿನ ಕಂಠ ಕಂಠದ ಬಲಿಪ ನಾರಾಯಣ ಭಾಗವತರು ಮತ್ತು ಉಜಿರೆಯ ‌ಧಣಿಗಳು,ಧಾರ್ಮಕ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಹೆಸರುವಾಸಿಯಾದಂತಹ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ವಿಜಯರಾಘವ ಪಡ್ವೆಟ್ನಾಯರನ್ನು ಸ್ಮರಿಸಿ ಅವರ ಸಾಧನೆಯ‌ ಬಗ್ಗೆ ನೆನೆದು ಶ್ರೀ ಭುಜಬಲಿ ಧರ್ಮಸ್ಥಳ ಮತ್ತು ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ ನುಡಿನಮನವನ್ನು ಸಲ್ಲಿಸಿದರು.

ವಿಜಯ ರಾಘವ ಪಡ್ವೆಟ್ನಾಯರ ಪುತ್ರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು – ಬಲಿಪರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಹಾಗು ವಿಜಯ ರಾಘವ ಪಡ್ವೆಟ್ನಾಯರ ಸೇವೆ‌ ,ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಬಲಿಪರಂತಹ‌ ಮಹಾನ್ ಚೇತನ ಮತ್ತು ಪಡ್ವೆಟ್ನಾಯರಂತಹ‌ ಮಹನೀಯರು ಸಮಾಜದ ಅನರ್ಘ್ಯ ರತ್ನಗಳೆಂದು ಸಾಧನೆಯ‌ನ್ನು ಸ್ಮರಿಸಿ ಕೀರ್ತಿಶೇಷರಿಗೆ ಅಕ್ಷರಾಂಜಲಿಗಳನ್ನು ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಡಾ.ಪ್ರದೀಪ ಆಟಿಕುಕ್ಕೆ ಇವರು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕರಾಡ ಬಂಧು ಭಗಿನಿಯರು ಹಾಗೂ ವಿಜಯ ರಾಘವ ಪಡ್ವೆಟ್ನಾಯರ ಮತ್ತು ಬಲಿಪ ನಾರಾಯಣ ಭಾಗವತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಮತಾ.ವಿ.ಭಟ್ ಸ್ವಾಗತಿಸಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಕಾರ್ಯಕ್ರಮಾನಂತರ ಇಬ್ಬರು ಮಹಾನ್ ಚೇತನರ ಸವಿ ನೆನಪಿಗಾಗಿ ಯಕ್ಷ ಭಾರತಿ ಕನ್ಯಾಡಿ ಇವರ ಸಂಯೋಜನೆಯಲ್ಲಿ “ಶ್ರೀ ರಾಮ ಪರಂಧಾಮ” ಯಕ್ಷಗಾನ ತಾಳಮದ್ದಳೆ ನಡೆಯಿತು.

Related posts

ಆಪರೇಷನ್ ಸಿಂದೂರ: ಪೆರಾಲ್ದರಕಟ್ಟೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಧರ್ಮಸ್ಥಳ : ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Suddi Udaya

ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಉಜಿರೆ ಲಕ್ಷ್ಮೀ ಗ್ರೂಪ್ ಗೆ ಭೇಟಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ‌ವ್ಯಾಪಾರಸ್ಥರ ಸಂಘ: ಜಾಗತಿಕ ಔಷಧಿ ತಜ್ಞರ ದಿನದ ಆಚರಣೆ

Suddi Udaya

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಸ್ವಾತಿ ಫಡಕೆಯವರಿಗೆ ಡಾಕ್ಟರೇಟ್ ಪದವಿ

Suddi Udaya
error: Content is protected !!