ಗುರುವಾಯನಕೆರೆಯಲ್ಲಿ ಶಾಸಕ ಹರೀಶ್ ಪೂಂಜಾ ರವರ ಬ್ರಹತ್ ಬ್ಯಾನರ್

Suddi Udaya

ಬೆಳ್ತಂಗಡಿ: ಗುರುವಾಯನಕೆರೆ- ನಾರಾವಿ ರಾಜ್ಯ ಹೆದ್ದಾರಿ ಶಕ್ತಿನಗರ ಸರ್ಕಲ್ ನಲ್ಲಿ ಶಾಸಕ ಹರೀಶ್ ಪೂಂಜರವರಿಗೆ ಶುಭಕೋರಿದ ಸುಮಾರು 40ಪೀಟ್ ಎತ್ತರದ ಬ್ರಹತ್ ಬ್ಯಾನರ್ ಅಳವಡಿಸಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹರೀಶ್ ಪೂಂಜರವರು ಪ್ರಚಂಡ ಬಹುಮತದಿಂದ ಗೆದ್ದು ಬರಬೇಕು ಎಂಬ ಬರಹದೊಂದಿಗೆ ಗುರುವಾಯನಕೆರೆ ಶಕ್ತಿನಗರ ಸಾಯಿರಾಮ್ ಪ್ರೆಂಡ್ಸ್ ತಂಡದ ವತಿಯಿಂದ ಶುಭಕೋರಿದ ಈ ಬ್ಯಾನರ್ ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಸಾಯಿರಾಮ್ ಫ್ರೆಂಡ್ಸ್ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಗುರುವಾಯನಕೆರೆ ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್, ಸದಸ್ಯ ಗಣೇಶ್ ಕುಲಾಲ್,ಉದ್ಯಮಿ ಶಮಂತ್ ಕುಮಾರ್ ಜೈನ್ ಕಳೆಂಜಿರೋಡಿ, ಸಾಯಿರಾಮ್ ಫ್ರೆಂಡ್ಸ್ ತಂಡದ ಸದಸ್ಯರಾದ ಅವಿನಾಶ್ ಕುಮಾರ್,ಜೀವನ್ ಕುಲಾಲ್,ವಿತೇಶ್,ದೀಕ್ಷಿತ್,ರವೀಂದ್ರ, ಪ್ರಶಾಂತ್ ಆಚಾರ್ಯ,ಜಯೇಂದ್ರ ಆಚಾರ್ಯ,ದಾಮು ಪಾಡ್ಯರು,ಸುಕೇಶ್ ಕಡಂಬು,ರಮೇಶ್ ನಾಯ್ಕ,ಪ್ರೇಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!