24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಶ್ರೀ ಪದ್ಮನಾಭಸ್ವಾಮಿ ಅಕ್ಷರ ದೇಶಿ ಸಮುದಾಯ ಸಂಘ ಅಧ್ಯಕ್ಷರಾಗಿ ಶರತ್ ಕೃಷ್ಣ ಪಡ್ವೆಟ್ನಾಯ

ಕೊಕ್ಕಡ: ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಪೂಜಾ ಹಕ್ಕನ್ನು ಹೊಂದಿರುವ ಶಿವಳ್ಳಿ ಬ್ರಾಹ್ಮಣ ಪಂಗಡಕ್ಕೆ ಸೇರಿದ ಶಬರಾಯ, ಯಡಪಡಿತ್ತಾಯ, ಉಪ್ಪಾರ್ಣ, ಮುಡಂಬಳಿತ್ತಾಯ, ಪಡ್ವೆಟ್ನಾಯ, ಅರಿಪಡಿತ್ತಾಯ, ತೋಡ್ತಿಲ್ಲಾಯ, ಅರಿಮಣಿತ್ತಾಯ ಈ ಕುಟುಂಬದ ಸದಸ್ಯರ ಸಭೆಯು ಇತ್ತೀಚೆಗೆ ಕೊಕ್ಕಡ ಸುಬ್ರಹ್ಮಣ್ಯ ಶಬರಾಯರ ವಾಸುಕೀ ನಿಲಯದಲ್ಲಿ ಜರುಗಿತು.
ದೇವಳದ ಪೂಜಾ ಕರ್ತವ್ಯವನ್ನು ಸುಲಭವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಶ್ರೀ ಪದ್ಮನಾಭ ಸ್ವಾಮಿ ಅಕ್ಷರದೇಶಿ ಸಮುದಾಯ ಸಂಘ ಎನ್ನುವ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕಾರ್ಯದರ್ಶಿ ಬೊಣ್ಯಸಾಗು ಸತೀಶ್ ಯಡಪಡಿತ್ತಾಯ, ಸಹಕಾರ್ಯದರ್ಶಿಯಾಗಿ ರವಿಪ್ರಸಾದ್ ಯಡಪಡಿತ್ತಾಯ, ಕೋಶಾಧಿಕಾರಿಯಾಗಿ ಲಕ್ಷ್ಮೀ ನಾರಾಯಣ ಉಪ್ಪಾರ್ಣ, ಮಾರ್ಗದರ್ಶಕರಾಗಿ ಸುರೇಶ ಶಬರಾಯ ಹುರುಳಿಮಜಲು, ಸುಬ್ರಹ್ಮಣ್ಯ ಶಬರಾಯ ಮರುವಂತಿಲ, ಪ್ರವೀಣ್ ಯಡಪಡಿತ್ತಾಯ, ಸದಸ್ಯರಾಗಿ ಸುಬ್ರಹ್ಮಣ್ಯ ಶಬರಾಯ ಗುಂಡಿಮಾರು, ಪ್ರಶಾಂತ್ ಶಬರಾಯ ಗುಂಡಿಮಾರು, ವಿಷ್ಣುಪ್ರಸಾದ್ ಶಬರಾಯ ಪುತ್ಯೆ, ಸುಕುಮಾರ್ ಯಡಪಡಿತ್ತಾಯ ಪಾಳಾಲೆ, ಲಕ್ಷ್ಮೀನಾರಾಯಣ ಶಬರಾಯ ಮುಂಡೂರು, ಡೆಂಜ ವೆಂಕಟರಮಣ ಉಪ್ಪಾರ್ಣ, ರವಿ ಶಬರಾಯ ಕನ್ಯಾಡಿ, ಪದ್ಮನಾಭ ಶಬರಾಯ ಪಟ್ರಮೆ, ಸತ್ಯನಾರಾಯಣ ತೋಡ್ತಿಲ್ಲಾಯ ಕೊಕ್ಕಡ, ಮಂಡೆಗುಂಡಿ, ರಾಧಾಕೃಷ್ಣ ಯಡಪಡಿತ್ತಾಯ, ಸೀತಾರಾಮ ಯಡಪಡಿತ್ತಾಯ ಆಯ್ಕೆಯಾದರು. ನೀಲೇಶ್ವರ ಆಲಂಬಾಡಿ ವಾಸುದೇವನ್ ಪಟ್ಟೇರಿ ತಂತ್ರಿಗಳು ಅಧ್ಯಕ್ಷತೆ ವಹಿಸಿದ್ದರು.

Related posts

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಡಾ. ಬಾಬು ಜಗಜೀವನರಾಮ್ ರವರ 118 ನೇ ಜನ್ಮ ದಿನಾಚರಣೆ

Suddi Udaya

ಕಕ್ಕಿಂಜೆ: ರಮ್ಯ ಡ್ರೆಸ್ಸಸ್ ನಲ್ಲಿ ಶೇ. 10-30 ಡಿಸ್ಕೌಂಟ್ ಸೇಲ್

Suddi Udaya

ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಕುಟುಂಬಸ್ಥರಿಗೆ ಮೆಸ್ಕಾಂ ಇಲಾಖೆಯ ಪರಿಹಾರದ ಚೆಕ್ ನ್ನು ಶಾಸಕ ಹರೀಶ್ ಪೂಂಜರಿಂದ ಹಸ್ತಾಂತರ

Suddi Udaya

ಕೊಕ್ರಾಡಿ ಬೊಳ್ಳಕುಮೇರುನಲ್ಲಿ ಸುಲ್ಕೇರಿ ನದಿಯಲ್ಲಿ ಅಕ್ರಮ ಮರಳು ದಂಧೆ ವೇಣೂರು ಪೊಲೀಸರ ದಾಳಿ – ಡ್ರಜ್ಜಿಂಗ್ ಮಿಶನ್ ವಶ ಇಬ್ಬರ ಮೇಲೆ ಪ್ರಕರಣ ದಾಖಲು

Suddi Udaya

ಗುರಿಪಳ್ಳದಲ್ಲಿ ಜಾನುವರು ಕಟ್ಟಿದ್ದ ಹಗ್ಗ ಸಿಲುಕಿ ರಿಕ್ಷಾ ಪಲ್ಟಿ : ಚಾಲಕ ರಾಮಣ್ಣ ಗೌಡ ಹಾಗೂ ಪ್ರಯಾಣಿಕರಿಗೆ ಗಾಯ

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!