July 23, 2026
ತಾಲೂಕು ಸುದ್ದಿರಾಜ್ಯ ಸುದ್ದಿ

ಇಂದಿನಿಂದ ಐಪಿಎಲ್ ಕ್ರಿಕೆಟ್ ಧಮಾಕಾ

ಬೆಳ್ತಂಗಡಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. ರಾಜ್ಯದಲ್ಲಿ ಚುನಾವಣೆಯ ಬಿಸಿ ಏರಿರುವ ನಡುವೆ ದೇಶದ ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್ ಕುತೂಹಲ ಗರಿಗೆದರಿದೆ

. ರಾಜಕಾರಣಿಗಳ ಮತಬೇಟೆ, ಮತದಾರರ ಹಕ್ಕು ಚಲಾವಣೆಯ ನಡುವೆ,ಕ್ರಿಕೆಟಿಗರ ವಿಕೆಟ್ ಬೇಟೆ, ರನ್ ದಾಹ, ಸಿಕ್ಸರ್- ಬೌಂಡರಿಗಳ ಸಿರಿಮಳೆ ಸಾಗಲಿದೆ. ಕರೋನಾ ಭೀತಿಯನ್ನೆಲ್ಲ ನಿವಾರಿಸಿಕೊಂಡು ಐಪಿಎಲ್ ತನ್ನ 16ನೇ ಆವೃತ್ತಿಯಲ್ಲಿ ಮತ್ತೆ ಹಿಂದಿನ ಸ್ವರೂಪ, ಸಂಭ್ರಮ, ಶ್ರೀಮಂತಿಕೆಯಲ್ಲೇ ಮರಳುತ್ತಿದೆ. ಟೂರ್ನಿಯಲ್ಲಿ ಆಡುವ ಎಲ್ಲ 10 ತಂಡಗಳು ಮತ್ತೆ ತಮ್ಮ ತವರು ತಾಣಗಳಲ್ಲೇ ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಪಡೆದುಕೊಂಡಿವೆ. ಪ್ರೇಕ್ಷಕರೂ ಮತ್ತೆ ಶೇಕಡ 100 ಪ್ರಮಾಣದಲ್ಲಿ ಕ್ರೀಡಾಂಗಣಕ್ಕೆ ಮರಳುವ ಅವಕಾಶ ಪಡೆದುಕೊಂಡಿದ್ದಾರೆ. ಟಿವಿ ಜತೆಗೆ ಓಟಿಟಿ ವೇದಿಕೆಯಲ್ಲೂ ಐಪಿಎಲ್ ಮನರಂಜನೆ ಕ್ರಿಕೆಟ್ ಪ್ರೇಮಿಗಳ ಮನೆ- ಮೊಬೈಲ್ ತಲುಪಲಿದೆ. ಕಳೆದ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರಿರುವುದರಿಂದ ಐಪಿಎಲ್ ಕುಟುಂಬವೂ ದೊಡ್ಡದಾಗಿದೆ.
ತಂಡಗಳು:
ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್’ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ , ಪಂಜಾಬ್ ಕಿಂಗ್ಸ್ , ಗುಜರಾತ್ ಟೈಟಾನ್ಸ್ , ಸನ್’ರೈಸರ್ಸ್ ಹೈದರಾಬಾದ್

Related posts

18 ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕಾಜೂರು ಉರೂಸ್‌ ಸಮಾಪ್ತಿ : ಸಾವಿರಾರು ಮಂದಿಗೆ ಅನ್ನದಾನ

Suddi Udaya

ವೇಣೂರು: ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿವೃತ್ತರಾದ ಡಾ| ಎಲ್.ಹೆಚ್ ಮಂಜುನಾಥ್ ಅವರಿಗೆ ಸನ್ಮಾನ

Suddi Udaya

ಉಜಿರೆ ದುರ್ಗಾ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ನವೀಕೃತಗೊಂಡು ಶುಭಾರಂಭ

Suddi Udaya

ನಾರಾವಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಸುಧೀರ್ ಎಸ್.ಪಿ ಬೆಳ್ತಂಗಡಿ ಶಾಖೆಗೆ ವರ್ಗಾವಣೆ: ಗ್ರಾಹಕರು ಹಾಗೂ ಸಿಬ್ಬಂದಿಗಳಿಂದ ಬಿಳ್ಕೋಡುಗೆ ಸಮಾರಂಭ

Suddi Udaya
error: Content is protected !!