July 23, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಸಾಧಕರು

ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಆಯ್ಕೆ

ಬೆಳ್ತಂಗಡಿ : ಸುರತ್ಕಲ್‌ನ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣಾ ವೇದಿಕೆ ಪ್ರತಿವರ್ಷ ನೀಡುವ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಐತಿಹಾಸಿಕ ದಾಖಲೆ ಹೊಂದಿರುವ ಶ್ರೀ ಧರ್ಮಸ್ಥಳ ಮೇಳದ ಯಶಸ್ವಿ ಸಂಚಾಲಕರಾಗಿ ನಾಲ್ಕು ದಶಕಗಳಿಗೂ ಮಿಕ್ಕಿದ ಅನುಭವವಿರುವ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ಮೊದಲಾದ ಆಡಳಿತಾತ್ಮಕ ಅನುಭವ ಪರಿಗಣಿಸಿ ಡಿ.ಹರ್ಷೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಕಾರ್ಯಾಧ್ಯಕ್ಷ ಅಗರಿ ರಾಘವೇಂದ್ರ ರಾವ್‌ ತಿಳಿಸಿದ್ದಾರೆ.
ಅಗರಿ ಶೈಲಿಯನ್ನು ರಂಗದಲ್ಲಿ ಬಳಸಿ, ಅದರ ಉಳಿವು ಮತ್ತು ಬೆಳೆಯುವಿಕೆಯಲ್ಲಿ ತೊಡಗಿರುವ ಭಾಗವತ ಗಿರೀಶ್ ರೈ ಕಕ್ಯಪದವು ಅವರಿಗೆ ಅಗರಿ ಶೈಲಿ ಪ್ರಶಸ್ತಿ ಮತ್ತು ಅಗರಿ ಶ್ರೀನಿವಾಸ ಭಾಗವತರ ಶ್ರೀ ದೇವಿಮಹಾತ್ಮ ಪ್ರಸಂಗದ ವಿಶೇಷ ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿರುವ ವಾದಿರಾಜ ಕಲ್ಲೂರಾಯರಿಗೆ ಅಗರಿ ವಿಶೇಷ ಸನ್ಮಾನ ಈ ಸಂದರ್ಭ ನಡೆಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವಿಧಾನ ಪರಿಷತ್ ನೈರುತ್ಯ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಭಾರಿ ಮತಗಳ ಅಂತರದಿಂದ ಗೆಲುವು

Suddi Udaya

ವಿಶ್ವಕರ್ಮ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಕಲ್ಲುಂಜ ಪ್ರಗತಿಪರ ಕೃಷಿಕ, ನಾಟಿ ವೈದ್ಯ ಅಣ್ಣಿ ಶೆಟ್ಟಿ ನಿಧನ

Suddi Udaya

ಬಿಜೆಪಿ ಕುಕ್ಕೇಡಿ ಶಕ್ತಿ ಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ನಾಳ: ದ್ವಿಚಕ್ರ ವಾಹನ ಅಪಘಾತ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮೇಲಂತಬೆಟ್ಟು: ಕಜೆ ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya
error: Content is protected !!