September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜಕೀಯ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಬೆಳ್ತಂಗಡಿ: ಭಾರತೀಯ ಜನಾತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಎ.6 ರಂದು ವಾಣಿ ಶಾಲಾ ಬಳಿ ನೂತನವಾಗಿ ಆರಂಭಗೊಂಡ ಚುನಾವಣಾ ಕಚೇರಿಯಲ್ಲಿ ಜರುಗಿತು.

ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಬಿಜೆಪಿ ಸ್ಥಾಪನೆ ಹಾಗೂ ಪಕ್ಷದ ಆಸ್ತಿತ್ವಕ್ಕಾಗಿ ಆ ಕಾಲದಲ್ಲಿ ಹೋರಾಟ ನಡೆಸಿದವರನ್ನು ನೆನಪಿಸಿಕೊಂಡು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬಹುಮತದಿಂದ ಆರಿಸುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.


ಶಾಸಕರ ತಂದೆ ಮುತ್ತಣ್ಣ ಪೂಂಜ, ಬಿಜೆಪಿಯ ಹಿರಿಯ ಹಿರಿಯ ಹಾಗೂ ಹಿರಿಯ ನ್ಯಾಯವಾದಿಯಾಗಿರುವ ನೇಮಿರಾಜ್ ಶೆಟ್ಟಿ ಪಡಂಗಡಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು., ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಗಾಲು. ಮಂಡಲ ಕಾರ್ಯದರ್ಶಿ

ಪ್ರಶಾಂತ್ ಪಾರೆಂಕಿ, ಮಾಜಿ ಮಂಡಲದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸವಣಾಲು, ಸೋಮನಾಥ ಬಂಗೇರ ವರ್ಪಾಳೆ, ನಾರಾಯಣ ಭಟ್ ಮುಗುಳಿ.,ಶ್ರೀನಿವಾಶ ಕಿಣಿ ನಾರಾವಿ., ಸುಬ್ರಹ್ಮಣ್ಯ ಕುಮಾರ ಅಗರ್ತ, ಪದ್ಮನಾಭ ಅರ್ಕಜೆ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ, ಸುಧೀ. , ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದಗೌಡ, ಶರತ್ಕುಮಾರ್ ಕುಮಾರ್ ಶೆಟ್ಟಿ, ರತ್ನಾಕರ ಬುಣ್ಣನ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಕೇಶವಭಟ್ ಅತ್ತಾಜೆ, ಸೀತಾರಾಮ ಬಿ.ಎಸ್, ಆನಂದಶೆಟ್ಟಿ ವಾತ್ಸಲ್ಯ, ಕೃಷ್ಣಯ್ಯಚಾರ್, ಸಂತೋಷ

ಕುಮಾರ್ ಜೈನ್ ಪಡಂಗಡಿ, ಲ್ಯಾನ್ಸಿಪಿಂಟೋ, ಅಹಮ್ಮದ್ ಬಾವ ಪಡಂಗಡಿ, ನಿರ್ಮಲ್‌ಕುಮಾರ್, ಸಂಜೀವಶೆಟ್ಟಿ ಮೊಗೇರೋಡಿ, ಪ್ರಾಸಿಸ್‌ವಿ.ವಿ, ಬೆಳ್ತಂಗಡಿ ಸಿ.ಎ.ಬ್ಯಾಂಕ್, ಅಧ್ಯಕ್ಷ ಅಜಿತ್ ಅರಿಗ್ಯಾಂಕ್. ಬೆಳ್ತಂಗಡಿ ಚುನಾವಣೆ ಪ್ರಭಾರಿ ಆಶಾ ತಿಮ್ಮಪ್ಪ, ಕರುಣಾಕರ ಸಾಲ್ಯಾನ್ ಉಪ್ಪಿನಂಗಡಿ, ಎಲ್ಲಾ ಪಂಚಾಯತ್ ಅಧ್ಯಕ್ಷರು ಸದಸ್ಯರು .ಎಲ್ಲಾ ಮಾಜಿ ತಾ.ಪಂ ಸದಸ್ಯರು. ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಸಭೆ

Suddi Udaya

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣ : ಎಸ್.ಐ.ಟಿಗೆ ಹಸ್ತಾಂತರಿಸುವಂತೆ ಆದೇಶ

Suddi Udaya

ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೊಯ್ಯೂರು ಪಿ ಚಂದ್ರಶೇಖರ ಸಾಲ್ಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya

ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಭಿವೃದ್ಧಿ ಅಗಲೀಕರಣ ಕಾಮಗಾರಿ ಆರಂಭ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!