25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು..ಸಂಘದ ಹಿರಿಯ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಪ್ರವೀಣ್ ರೈ ಸ್ವಾಗತಿಸಿ ಧ್ವಜಾರೋಹಣ ನಡೆಸಿ ಭಾರತ ದೇಶದ ಸೈನಿಕರ ಸೇವೆಯಿಂದ ನಾವು ಇಂದು ಊರಿನ ಜನರೆಲ್ಲ ಸೇರಿಕೊಂಡು ನಿರ್ಭಿತಿಯಿಂದ ಸದ್ಭಾವನೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಅತಿಥಿ ಜೆರೋಮ್ ಬ್ರಾಗ್ಸ್ ಮಾತನಾಡಿ ಹಿಂದೆ ನಾವು ಸ್ವತಂತ್ರರಾಗಿ ಇದ್ದ ಸಂಧರ್ಭ ನಮ್ಮೊಳಗಿನ ತಾರತಮ್ಯ ಮೇಲು ಕೀಳು, ಜಾತಿ ಮತ ಬೇರೆ ಬೇರೆ ಭಾಷೆ ಊರು ಎಂಬ ಬೇದ ಭಾವ ಇರುವುದನ್ನು ಅರಿತ ಬ್ರಿಟಿಷರು ನಮ್ಮನ್ನು ಸೋಲಿಸಿ ಸ್ವಾತಂತ್ರ್ಯಕಳೆದುಕೊಳ್ಳ ಬೇಕಾಯಿತು, ಸ್ವಾತಂತ್ರ ಸಿಕ್ಕಿದ ನಂತರ ನಾವು ಅದನ್ನು ಉಳಿಸ ಬೇಕಾದರೆ ಎಲ್ಲರೂ ಜಾತಿ ಮತ ಪಕ್ಷ ಮರೆತು ಒಗ್ಗಟ್ಟಾಗಿ ನಾವೆಲ್ಲರೂ ಓಂದೇ ಭಾರತೀಯರು ಎಂಬ ರಾಷ್ಟ್ರೀಯ ಭಾವನೆಯಿಂದ ಒಟ್ಟಾಗಿ ಜೀವನ ನಡೆಸಬೇಕು ಎಂಬುದಾಗಿ ಹೇಳಿದರು,

ಹಿರಿಯ ಸದಸ್ಯರಾದ ಉಮ್ಮರಬ್ಬ, ಅಣ್ಣಿ ಪೂಜಾರಿ ಚೀಮುಳ್ಳು ಅತಿಥಿಗಳಾಗಿ ಪಾಲ್ಗೊಂಡರು. ಸಂಘದ ಉಪಾಧ್ಯಕ್ಷ ಶಿವರಾಮ ನ್ಯಾಕ್, ನಿರ್ದೇಶಕರಾದ ರಾಜೇಶ್ ರೈ, ಪ್ರಸನ್ನ ಗೌಡ, ಪಾಶ್ವ೯ನಾಥ್ ಜೈನ್, ಶೇಷಪ್ಪ ಸಾಲಿಯಾನ್, ಮೋಹನ್ ಗೌಡ ಅಜಿರ, ಚಂದ್ರಶೇಖರ, ಅರುಣ ಬಂಗೇರ, ಶ್ರೀಮತಿ ಲಿಡಿಯಾ ಜೆರೋಮ್ ಬ್ರಾಗ್ಸ್, ಶ್ರೀಮತಿ ಸವಿತಾ ವೆಂಕಟೇಶ್ ಪೂಜಾರಿ, ತೆಕ್ಕಾರು ಪ್ರಾ.ಕ್ರ.ಪ.ಸ ಸಂಘದ ಮುಖ್ಯ ಕಾರ್ಯನಿರ್ವಹನಾಧಿಕಾರಿ ರಾಘವೇಂದ್ರ ಅಡಪ, ಶಾಖಾ ಮ್ಯಾನೇಜರ್ ಶಶಿಧರ ಅಡಪ, ಪ್ರಶಾಂತ್ ಪೈ, ಮೋನಪ್ಪ ಗೌಡ ಮನಿಲ, ಅಬೂಬಕ್ಕರ್ ಕಳೆಂಜಿ ಬೈಲ್, ಹಾಗೂ ಇತರ ಸದಸ್ಯರು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಟಿ ವಂದಿಸಿದರು.

Related posts

ಎ.13-15: ಪಡಂಗಡಿ ಪೆರಣಮಂಜ ಮೂಜಿಲ್ನಾಯ ಬ್ರಹ್ಮ ದೈವಸ್ಥಾನದ ಜಾತ್ರೋತ್ಸವ

Suddi Udaya

ಕಲ್ಮಂಜ: ಅಹಲ್ಯಾ ಯಾನೆ ರಮಾ ಚಿಪ್ಲೂಣ್ಕರ್ ನಿಧನ

Suddi Udaya

ಓಡೀಲು 33ನೇ ಸಾರ್ವಜನಿಕ ಗಣೇಶೋತ್ಸವ: ಗಣಪತಿ ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya

ಬಾರ್ಯ: ಮುರುಗೋಳಿ ಶ್ರೀ ಪಾಂಡುರಂಗ ಭಜನಾ ಮಂದಿರ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.1.50 ಲಕ್ಷ ಡಿಡಿ ವಿತರಣೆ

Suddi Udaya

ನ್ಯಾಯತರ್ಪು ಸ್ವಸಹಾಯ ಸಂಘದ ಲಾಭಾಂಶ ವಿತರಣೆ

Suddi Udaya

ಸುಲ್ಕೇರಿಮೊಗ್ರು: ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿ

Suddi Udaya
error: Content is protected !!