ಬೆಳ್ತಂಗಡಿ ಹಾ.ಉ.ಸ.ಸಂಘದಿಂದ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ : ರೆಂಜಿಲಾಡಿ ಹಾ.ಉ.ಸ.ಸಂಘದ ಕಾರ್ಯದರ್ಶಿಯಾದ ರಂಜಿತಾ ರವರು ಆನೆ ತುಳಿತದಿಂದ ಮೃತಪಟ್ಟಿದ್ದು ಅವರ ಹೆತ್ತವರಿಗೆ ಆರ್ಥಿಕ ನೆರವನ್ನು ರೂ.65 ಸಾವಿರ ಮೊತ್ತವನ್ನು ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ, ಒಕ್ಕೂಟದ ಅಧ್ಯಕ್ಷ ಬಿ ಮಹಮ್ಮದ್‌ ಷರೀಫ್ ಹಾಗೂ ಬೆಳ್ತಂಗಡಿ ತಾಲೂಕು ನೌಕರರ ಸಂಘದ ಕಾರ್ಯದರ್ಶಿ ಮೇಬಲ್‌ ಕ್ರಾಸ್ತಾ ಹಾಗೂ ಗೌರವ ಸಲಹೆಗಾರರಾದ ಷಾಜಿ ಥೋಮಸ್‌ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯವರಾದ ಶ್ರೀಮತಿ ಸುಚಿತ್ರಾ , ಕಡಬ ತಾಲೂಕಿನ ವಿಸ್ತರಣಾಧಿಕಾರಿಯವರಾದ ಆದಿತ್ಯ, ಪೆರಾಡಿತ್ತಾಯಕಟ್ಟೆ ಹಾ. ಉ.ಸ. ಕಾರ್‍ಯದರ್ಶಿ ವಿದ್ಯಾನಂದ, ಹಳ್ಳಿಂಗೇರಿ ಹಾ. ಉ.ಸ. ಕಾರ್‍ಯದರ್ಶಿ ಸಂಧ್ಯಾ, ಪಟ್ಟೂರು ಹಾ. ಉ.ಸ. ಕಾರ್ಯದರ್ಶಿ ಸುಗಂಧಿ, ರೆಂಜಿಲಾಡಿ ಹಾ. ಉ.ಸ. ಕಾರ್‍ಯದರ್ಶಿ ದಿವ್ಯ, ರೆಂಜಿಲಾಡಿ ಹಾ. ಉ.ಸ. ಉಪಾಧ್ಯಕ್ಷರು ಉಪಸ್ಥಿತರಿದ್ದರು.

Leave a Comment

error: Content is protected !!