ಬೆಳ್ತಂಗಡಿ ಭಾರತ ಮಾತಾ ಪೂಜಾ ಸಮಿತಿಯಿಂದ ರಾಷ್ಟ್ರದೇವೋಭವ ಕಾರ್ಯಕ್ರಮ

Suddi Udaya

ವೇಣೂರು : ಬೆಳ್ತಂಗಡಿ ಭಾರತ ಮಾತಾ ಪೂಜಾ ಸಮಿತಿಯಿಂದ ರಾಷ್ಟ್ರದೇವೋಭವ ಕಾರ್ಯಕ್ರಮವು ವೇಣೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.

ಎ.ಬಿ.ವಿ.ಪಿ. ಮಂಗಳೂರು ವಿಭಾಗ ಪ್ರಮುಖರು, ಶ್ರೀ ನಾರಾಯಣ ಗುರು ಕಾಲೇಜು ಮಂಗಳೂರು ಇಲ್ಲಿನ ಉಪನ್ಯಾಸಕ ಕೇಶವ ಬಂಗೇರರು ದಿಕ್ಸೂಚಿ ಭಾಷಣ ಮಾಡಿದರು, ಭಾರತ್ ಮಾತಾ ಪೂಜಾ ಸಮಿತಿ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷ ಮಾಧವ ಕಾರಂತ್ ವೇಣೂರು ಅಧ್ಯಕ್ಷತೆ ವಹಿಸಿದ್ದರು, ಬಿಎಂಎಸ್ ಜಿಲ್ಲಾಧ್ಯಕ್ಷರು, ವಕೀಲರಾದ ಅನಿಲ್ ಕುಮಾರ್ ಯು ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಭಾರತ ಮಾತಾ ಪೂಜಾ ಸಮಿತಿಯ ಪ್ರಮುಖರಾದ ಶಿವ ಪ್ರಸಾದ್ ಮಲೆಬೆಟ್ಟು, ಸಂದೀಪ್ ಹೆಗ್ಡೆ, ಪ್ರಮೋದ್ ಪೆರಾಡಿ, ಸುಪ್ತ ಶಕ್ತಿಯ ರವಿ, ಧರ್ಮ ಜಾಗರಣದ ಮನಮೋಹನ್ ,ಹಿಂದೂ ಸಂಘಟನೆಯ ಪ್ರಮುಖರಾದ ನಿರಂಜನ್ ಕುಕ್ಕೆಡಿ, ರಕ್ಷಿತ್ ಸಾವ್ಯ, ಮೋಹನ್ ಅಂಡಿಂಜೆ, ಸುಂದರ ಹೆಗ್ಡೆ, ವಿಜಯ ಗೌಡ, ನೇಮಯ್ಯ್ ಕುಲಾಲ್, ಭಾಸ್ಕರ್ ಪೈ, ಜನಾರ್ಧನ ನಿಟ್ಟಡೆ, ಪ್ರತೀಕ್ಷ ಸುವರ್ಣ ರಾಷ್ಟ್ರ ಸೇವಕ ಸಮಿತಿಯ ಗಿರಿಜಮ್ಮ, ರೋಹಿಣಿ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

Leave a Comment

error: Content is protected !!