ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಮುಖ್ಯ ದ್ವಾರದ ಬಳಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ಚುನಾವಣಾ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಎ.15ರಂದು ನಡೆಯಿತು.

ಕಚೇರಿಯನ್ನು ಮಾಜಿ ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಮಾತನಾಡಿ ಇವತ್ತು ಚುನಾವಣಾ ಕಾರ್ಯಾಲಯ ಉದ್ಘಾಟಿಸಿದ್ದೇವೆ. ಮುಂದಿನ ದಿನ ಇದೇ ಕಚೇರಿಯಲ್ಲಿ ವಿಜಯೋತ್ಸವ ಆವರಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ ,ಪ್ರಚಾರ ಸಮಿತಿ ಸಂಯೋಜಕ ಭಗೀರಥ ಜಿ, ಪ್ರಮುಖರಾದ ಮನೋಹರ್ ಇಳಂತಿಲ, ಅಭಿನಂದನ್ ಹರೀಶ್ ಕುಮಾರ್, ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಅಮಿತಾ ಪೂಜಾರಿ ,ವಿನ್ಸೆಂಟ್ ಡಿಸೋಜಾ, ಅಬ್ದುಲ್ ರಹಿಮಾನ್ ಪಡ್ಪು, ಬಿ.ಕೆ ವಸಂತ, ಇಸ್ಮಾಯಿಲ್ ಕೆ, ಉಷಾ ಶರತ್, ಪ್ರಶಾಂತ್ ವೇಗಸ್, ಜಗದೀಶ್ ಡಿ, ವಂದನಾ ಭಂಡಾರಿ,ಸತೀಶ್ ಕಾಶಿಪಟ್ಣ, ಬಿ.ಎಂ ಹಮೀದ್, ಪ್ರಶಾಂತ್ ಮಚ್ಚಿನ, ಅನೂಪ್ ಬಂಗೇರ, ರಫೀಕ್, ಮೋಹನ್ ಶೆಟ್ಟಿಗಾರ್, ಪದ್ಮನಾಭ ಸಾಲಿಯಾನ್, ಯಶೋಧ ಕುತ್ಲೂರು, ವಸಂತಿ ಸಿ ಪೂಜಾರಿ, ಅಶ್ವಥ್ ಕಲ್ಲಾಜೆ, ಸಾಹುಲ್ ಹಮೀದ್ ಮತ್ತು ಪಕ್ಷದ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು ‌.

Leave a Comment

error: Content is protected !!