April 1, 2025
ಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ: “ಕಲ್ಕುಡ ಮಹಿಮೆ” ತುಳು ಭಕ್ತಿ ಗೀತೆ ಬಿಡುಗಡೆ

ನಾರಾವಿ : ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ. ಏನ್ ಕ್ರಿಯೇಷನ್ ರವರ  ವಜ್ರನಾಭ ಜೈನ್ ನಾರಾವಿ ನಿರ್ಮಾಣದ ಸುರೇಂದ್ರ ಜೈನ್ ನಾರಾವಿ ನಿರ್ದೇಶನದ ಕಲ್ಕುಡ ಮಹಿಮೆ ಎಂಬ ತುಳು ಭಕ್ತಿ ಗೀತೆ ಇತ್ತೀಚೆಗೆ ಅರಸಕಟ್ಟೆ ಕೊಲಾನಿ,ಕುತ್ಲೂರು ಶ್ರೀ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವಸ್ಥಾನದಲ್ಲಿ ಬಿಡುಗಡೆಗೊಂಡಿತ್ತು.

ಶ್ರೀ ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವದ ಮಹಿಮೆಯನ್ನು ಸಾರುವ ದೃಶ್ಯದ ಮೂಲಕ ವಿಭಿನ್ನ ಶೈಲಿಯ ಭಕ್ತಿಗೀತೆಯನ್ನು  ವಜ್ರನಾಭ ಜೈನ್ ನಾರಾವಿ ಲೋಕಾರ್ಪಣೆಗೊಳಿಸಿದರು. ಈ ಭಕ್ತಿ ಗೀತೆಯ ಸಾಹಿತ್ಯ ಶ್ರೀ ಪಾರ್ಶ್ವನಾಥ  ಜೈನ್ ಕಕ್ಯಪದವು ಗಾಯನ ಮತ್ತು ವಿಡಿಯೋ ಚಿತ್ರೀಕರಣ ಗಣೇಶ್ ಹೆಗ್ಡೆ ಧನ್ವಿತಾ ಸ್ಟುಡಿಯೋ ನಾರಾವಿ ಪರಿಕಲ್ಪನೆ ಹರಿಶ್ಚಂದ್ರ ಪೂಜಾರಿ ನಾರಾವಿ ಸಂಕಲನ ರಕ್ಷಿತ್ ರೈ ತಾಂತ್ರಿಕ ಸಲಹೆ ಯಶವಂತ್ ಬೆಳ್ತಂಗಡಿ ಸಹಕರಿಸಿದ್ದಾರೆ. ಕ್ಷೇತ್ರದ ಅರ್ಚಕರಾದ ರಮೇಶ್ ಭಟ್ ಕೊಕ್ರಾಡಿ ಶುಭ ಹಾರೈಸಿದರು. ತಂಡದ ಸದಸ್ಯರಾದ ಸೂರಜ್ ಜೈನ್, ಶೀನ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya

ಓಡೀಲು 33ನೇ ಸಾರ್ವಜನಿಕ ಗಣೇಶೋತ್ಸವ: ಗಣಪತಿ ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya

ಆಳ್ವಾಸ್ ಕ್ರಿಸ್ಮಸ್ ಸಂಭ್ರಮ: ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಡಾ.ಯು.ಸಿ.ಪೌಲೋಸ್ ಮತ್ತು ಶ್ರೀಮತಿ ಮೇರಿ ಯು.ಪಿ. ದಂಪತಿಗೆ ಸನ್ಮಾನ

Suddi Udaya

ನಿಡ್ಲೆ: ದಿ. ಗಣಪತಿ ದೇವಧರ್ ಇವರ ಸ್ಮರಣಾರ್ಥದಲ್ಲಿ “ಪ್ರತಿ ಸ್ವರ್ಗ” ಯಕ್ಷಗಾನ ತಾಳಮದ್ದಳೆ

Suddi Udaya

ನಾಗರಿಕ ಯುವಜನ ವೇದಿಕೆಯಿಂದ ಯೂತ್ ಸಿವಿಲ್ ಫಾರಂ ಬೆಳ್ತಂಗಡಿ ಇದರ ನೂತನ ಸಮಿತಿ ರಚನೆ

Suddi Udaya

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ : ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!