April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ ಎಸ್ . ಡಿ.ಎಂ. ಪಾಲಿಟೆಕ್ನಿಕ್ ನಲ್ಲಿ “ಸರ್ಕ್ಯೂಟ್ ಎಕ್ಸ್ಪೋ “

 ಉಜಿರೆ: ಭಾರತ ದೇಶದಲ್ಲಿ  ಸೆಮಿ ಕಂಡಕ್ಟರ್ ಸರ್ಕ್ಯೂಟ್  ನಿರ್ಮಾಣಕ್ಕೆ ವಿಶೇಷ ಒತ್ತು ನೀಡುತ್ತಿದೆ. ಚಿಪ್ ತಯಾರಿಕಾ ಫ್ಯಾಕ್ಟರಿಗಳಿಗೆ  ಸೆಟ್ ಅಪ್ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಸಿಲಿಕಾನ್ ನಲ್ಲಿ ಫ್ಯಾಬ್ರಿಕೇಟ್ ಮಾಡಲು ಬೇಕಾದ ಹಾಗೆ ತಂತ್ರಜ್ಞಾನ  ಬೆಳವಣಿಗೆಯಾಗಿದೆ. ವೈಯಕ್ತಿಕ ಬೆಳವಣಿಗೆಗೂ  ಇಂತಹ  ಅವಕಾಶ ಕಲ್ಪಿಸುತ್ತಿರುವುದು ಸೂಕ್ತವಾಗಿದೆ. ಯೋಚನೆಯಿದ್ದರೆ ಯುವಕರ ಕ್ರಿಯಾಶೀಲತೆಗೆ ಸಾಕಷ್ಟು ಅವಕಾಶಗಳಿವೆ. ಶಿಸ್ತು, ಪ್ರಾಮಾಣಿಕತೆಯಿದ್ದರೆ ಉತ್ತಮ ಕಾರ್ಯಕ್ರಮ ಮೂಡಿ ಬರುತ್ತದೆ  ಎಂದು ಬೆಂಗಳೂರಿನ ಬಿ.ಎಂ. ಆರ್.  ಕಂಪನಿಯ ಸಾಫ್ಟ್ ವೆರ್ ಇಂಜಿನಿಯರ್ ನಿಖಿಲ್ ಮೂಡಬಿದ್ರಿ ನುಡಿದರು.                                           

ಅವರು  ಎ.20 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪೊಲಿಟೆಕ್ನಿಕ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್  ವಿಭಾಗದ ವಿದ್ಯಾರ್ಥಿಗಳು  ಸಿದ್ಧಪಡಿಸಿದ “ಸರ್ಕ್ಯೂಟ್ ಎಕ್ಸ್ಪೋ 2ಕೆ 23 ” ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿ ಎಸ್ .ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ  ಹರೀಶ್ ಎಂ.ವೈ  ಮಾತನಾಡಿ  ಶ್ರೀ ಕ್ಷೇತ್ರ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಮತ್ತು ಧರ್ಮಾಧಿಕಾರಿ ಡಾ!ಡಿ.ವೀರೇಂದ್ರ ಹೆಗ್ಗಡೆಯವರ ಪೂರ್ಣ ಸಹಕಾರದಿಂದ   ಇಲ್ಲಿ ಅಸಾಧ್ಯವೆಂಬುದು ಯಾವುದೂ  ಇಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಹೊಸ ಹೊಸ ಆವಿಷ್ಕಾರಗಳು, ಸಂಶೋಧನೆಗಳ ಮೂಲಕ ಸಮಾಜಕ್ಕೆ,ದೇಶಕ್ಕೆ  ಉಪಯುಕ್ತವಾಗಿರುವುದನ್ನು ಬೇರೆ ದೇಶಗಳನ್ನು ಅವಲಂಬಿಸದೆ ನಮ್ಮ ದೇಶದಲ್ಲೇ ಸಿದ್ಧಪಡಿಸಲು  ಸಾಧ್ಯವಿದೆ. ನಮ್ಮ ವಿಜ್ಞಾನಿಗಳ ಶಕ್ತಿ,ಪರಿಶ್ರಮ ,ಯೋಚನಾಲಹರಿಯಿಂದ ಏನನ್ನೂ ಸಾಧಿಸಬಹುದು. ಅವಕಾಶಗಳಿದ್ದರೆ ಬುದ್ಧಿವಂತಿಕೆ,ಸಾಧನೆಗೆ ಮಿತಿಯಿಲ್ಲ. ನಾವು ಸ್ವಾವಲಂಬನೆಯ ಸ್ಥಿತಿಗೆ ಬರಬೇಕು ಎಂದು ನುಡಿದರು.             

ಎಸ್ .ಡಿ.ಎಂ. ಪೊಲಿಟೆಕ್ನಿಕ್ ಪ್ರಿನ್ಸಿಪಾಲ್ ಸಂತೋಷ್, ವಿಭಾಗ ಮುಖ್ಯಸ್ಥೆ ಮೇರಿ ಸ್ಮಿತಾ, ಮ್ಯಾನೇಜರ್ ಚಂದ್ರನಾಥ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ 3೦ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲಾಗಿದ್ದು ಅದಕ್ಕೆ  ಹರೀಶ್ ಎಂ.ವೈ ಚಾಲನೆ ನೀಡಿದರು. ವಿದ್ಯಾರ್ಥಿಗಳಾದ ಶ್ರೀಧ್ಯಾನ್ ಸ್ವಾಗತಿಸಿ,ಭೂಮಿಕಾ ಡಿ. ಆರ್ ಪ್ರಸ್ತಾವಿಸಿ,ಸ್ನೇಹ ವಂದಿಸಿದರು.

Related posts

ವಾಣಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 12ನೇ ವಷ೯ದ ವೈಭವದ ಪಾದಯಾತ್ರೆ: ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು : ಶಿವನಾಮ ಸ್ಮರಣೆಯೊಂದಿಗೆ ಭಕ್ತರ ಹೆಜ್ಜೆ

Suddi Udaya

ನಾರಾವಿ: “ಕಲ್ಕುಡ ಮಹಿಮೆ” ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಎಸ್ ಡಿ ಎಂ ಬೆಳ್ತಂಗಡಿ ಆಂಗ್ಲ ಮಾಧ್ಯಮ ಶಾಲೆಗೆ ಸಿ ಡಬ್ಲ್ಯೂ ಬಿ ವಿದ್ಯಾರ್ಥಿಗಳ ತಂಡ ಭೇಟಿ

Suddi Udaya

ನಾರಾವಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮಾ.6 : ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!