ಕೊಕ್ಕಡ: ಜೇಸಿ ಆಡಳಿತ ಸಭೆ: ಚುನಾವಣೆ ಅರಿವು ಆಂದೋಲನ ಕಾರ್ಯಕ್ರಮ

Suddi Udaya

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಆಡಳಿತ ಮಂಡಳಿ ಸಭೆ ಎ.22 ರಂದು ಕೊಕ್ಕಡ ಮರಿಯಾಕೃಪಾ ಕಚೇರಿಯಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು. ರಾಜ್ಯದಲ್ಲಿ ಮತದಾನದ ಅರಿವು ಮೂಡಿಸುವುದು. ಶೇಕಡಾ ನೂರರಷ್ಟು ಮತದಾನ ಮಾಡಲು ಜಾಗ್ರತಿ ಮಾಡುವುದು, ಅಶಕ್ತರಿಗೆ ದಾನ್ ಕಾರ್ಯಕ್ರಮ, ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಮುಂತಾದ ರಾಷ್ಟ್ರೀಯ ಸೇವಾ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಯಿತು.

ಜೋಸೆಫ್ ಪಿರೇರಾ ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶುಭ ಹಾರೈಸಿದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Leave a Comment

error: Content is protected !!