ಬಿ.ಜೆ.ಪಿ ಮನೆ ಮನೆ ಪ್ರಚಾರ ಕಾರ್ಯಕ್ಕೆ ಹರೀಶ್ ಪೂಂಜ ಚಾಲನೆ

Suddi Udaya

Updated on:

ಬೆಳ್ತಂಗಡಿ: 2023ರ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಹರೀಶ್ ಪೂಂಜ ಅವರು ಇಂದು ಎ. 22 ರಂದು ಮನೆ ಭೇಟಿಯ ಮೂಲಕ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿದರು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವೇಣೂರಿನಿಂದ ಪ್ರಚಾರ ಕಾರ್ಯ ಆರಂಭಿಸಿದ ಶಾಸಕರು 10 ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ದಿನ ವಿಡೀ ಶಾಸಕರು

ಬಜಿರೆ,ಗುಂಡೂರಿ,ಆರಂಬೋಡಿ,ಹೊಸಂಗಡಿ, ಬಡಕೋಡಿ, ಕಾಶಿಪಟ್ಟ,ಪೆರಾಡಿ,ನಾರಾವಿ, ಕುತ್ತೂರು,ಕೊಕ್ರಾಡಿ,ಸಾವ್ಯ,ಅಂಡಿಂಜೆ ಗ್ರಾಮಗಳ ಮನೆ ಭೇಟಿ ನಡೆಸಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿ,ಮೋದಿ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಅರಿವುಮೂಡಿಸಿ,


ಕ್ಷೇತ್ರದ ಜನರು ಪ್ರೀತಿ, ಆದರಗಳಿಂದ ಸ್ವಾಗತಿಸುತ್ತಿದ್ದಾರೆ: ಹರೀಶ್ ಪೂಂಜ

ಇಂದು ನಮ್ಮಮನೆಮನೆ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ನಾವು ಸಂಘಟನಾತ್ಮಕವಾಗಿ ಬಲಿಷ್ಠವಾಗಿರುವ ಕಾರಣ ಕಟ್ಟ ಕಡೆಯ ಕಾರ್ಯಕರ್ತರನ್ನೂ ತಲುಪಲು ನಮ್ಮಿಂದ ಸಾಧ್ಯವಾಗುತ್ತಿದೆ.ಇಂದಿನ ಮೊದಲ ದಿನದ ಮನೆ ಭೇಟಿಯ ವೇಳೆ ಕ್ಷೇತ್ರದ ಜನರು ಪ್ರೀತಿ, ಆದರಗಳಿಂದ ಸ್ವಾಗತಿಸಿದ್ದಾರೆ.ನಮ್ಮಕಾರ್ಯಕರ್ತರು ಅತ್ಯುತ್ಸಾಹದಿಂದ ಕೆಲಸಮಾಡುತ್ತಿದ್ದು ಕಾರ್ಯಕರ್ತರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು
-ಹರೀಶ್ ಪೂಂಜ

Leave a Comment

error: Content is protected !!