32.9 C
ಪುತ್ತೂರು, ಬೆಳ್ತಂಗಡಿ
March 6, 2026
ಚಿತ್ರ ವರದಿನಿಧನ

ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾದ ಮಾಚಾರು ಗೋಪಾಲ ನಾಯ್ಕ ನಿಧನ

ಬೆಳ್ತಂಗಡಿ: ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾಗಿದ್ದ, ಮಾಚಾರು ಗೋಪಾಲ ನಾಯ್ಕ(88 ವಷ೯) ಎ.24 ರಂದು ನಿಧನರಾದರು.
ಜನಪದ ಸಂದಿ ಹೇಳುವುದರಲ್ಲಿ ಪ್ರಖ್ಯಾತ ರಾಗಿದ್ದ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತ ರಾಗಿದ್ದರು.

ಅವರು ಸೃಜಿಸಿರುವ ಸಿರಿ ಕಾವ್ಯದ ಎರಡು ಪಠ್ಯಗಳಿವೆ. ಮೊದಲನೆಯದು ಅವರು ಹಾಡಿದ ಪಠ್ಯ. 15,683 ಸಾಲುಗಳಿರುವ ದೀರ್ಘ ಪಠ್ಯ. ಎರಡನೆಯದು ಅವರು ಬರೆದುಕೊಳ್ಳಲು ಅನುಕೂಲವಾಗುವಂತೆ ಹೇಳಿದ ಪಠ್ಯ. ಇದು ಹಾಡಿದ ಪಠ್ಯದ ಅರ್ಧದಷ್ಟಿದೆ. ಹಾಡಿದ ಮತ್ತು ಹೇಳಿದ ಎರಡು ಪಠ್ಯಗಳು ನಾಯ್ಕ ಅವರ ಹೆಸರಿನಲ್ಲಿ ಮಾತ್ರ ಇವೆ. ತೌಲನಿಕ ಅಧ್ಯಯನಕ್ಕೆ ಮತ್ತು ಕಾವ್ಯ ನಿರ್ಮಾಣದ ನೆಲೆಗಳನ್ನು ಶೋಧಿಸುವುದಕ್ಕೆ ಅವರ ಈ ಎರಡು ಪಠ್ಯಗಳು ಸಹಾಯಕವಾಗಿವೆ.ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಸಿಎ ಪರೀಕ್ಷೆಯಲ್ಲಿ ಉಜಿರೆಯ ವಫಾ ಉತ್ತೀರ್ಣ

Suddi Udaya

ಬೆಳ್ತಂಗಡಿ: ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಶಿಬಿರ

Suddi Udaya

ಪಟ್ರಮೆ: ಜೀಪು ಹಾಗೂ ಗೂಡ್ಸ್ ಟೆಂಪೋ ನಡುವೆ ಅಪಘಾತ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಭೇಟಿ

Suddi Udaya

ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅ.ಪ್ರೌ. ಶಾಲೆ ಮತ್ತು ಪ. ಪೂ. ಕಾಲೇಜಿನಲ್ಲಿ ಹಣ್ಣಿನ ಗಿಡಗಳ ನಾಟಿ

Suddi Udaya

ಸಂಚಾರಿ ಪೊಲೀಸರಿಂದ ವಾಹನಗಳ ಎಲ್‌ಇಡಿ ಬಲ್ಬ್ ತೆರವು ಕಾರ್ಯಾಚರಣೆ

Suddi Udaya
error: Content is protected !!