April 2, 2025
ಚಿತ್ರ ವರದಿನಿಧನ

ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾದ ಮಾಚಾರು ಗೋಪಾಲ ನಾಯ್ಕ ನಿಧನ

ಬೆಳ್ತಂಗಡಿ: ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾಗಿದ್ದ, ಮಾಚಾರು ಗೋಪಾಲ ನಾಯ್ಕ(88 ವಷ೯) ಎ.24 ರಂದು ನಿಧನರಾದರು.
ಜನಪದ ಸಂದಿ ಹೇಳುವುದರಲ್ಲಿ ಪ್ರಖ್ಯಾತ ರಾಗಿದ್ದ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತ ರಾಗಿದ್ದರು.

ಅವರು ಸೃಜಿಸಿರುವ ಸಿರಿ ಕಾವ್ಯದ ಎರಡು ಪಠ್ಯಗಳಿವೆ. ಮೊದಲನೆಯದು ಅವರು ಹಾಡಿದ ಪಠ್ಯ. 15,683 ಸಾಲುಗಳಿರುವ ದೀರ್ಘ ಪಠ್ಯ. ಎರಡನೆಯದು ಅವರು ಬರೆದುಕೊಳ್ಳಲು ಅನುಕೂಲವಾಗುವಂತೆ ಹೇಳಿದ ಪಠ್ಯ. ಇದು ಹಾಡಿದ ಪಠ್ಯದ ಅರ್ಧದಷ್ಟಿದೆ. ಹಾಡಿದ ಮತ್ತು ಹೇಳಿದ ಎರಡು ಪಠ್ಯಗಳು ನಾಯ್ಕ ಅವರ ಹೆಸರಿನಲ್ಲಿ ಮಾತ್ರ ಇವೆ. ತೌಲನಿಕ ಅಧ್ಯಯನಕ್ಕೆ ಮತ್ತು ಕಾವ್ಯ ನಿರ್ಮಾಣದ ನೆಲೆಗಳನ್ನು ಶೋಧಿಸುವುದಕ್ಕೆ ಅವರ ಈ ಎರಡು ಪಠ್ಯಗಳು ಸಹಾಯಕವಾಗಿವೆ.ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಬಂದಾರು: ಬಟ್ಲಡ್ಕ ದರ್ಗಾ ಶರೀಫ್ ನಲ್ಲಿ ಉರೂಸ್ ಮುಬಾರಕ್

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ದೊಂಡೊಲೆಯ ವಿಕಲಚೇತನ ಕುಟುಂಬಕ್ಕೆ ಸಹಾಯಹಸ್ತ : ಅರ್ಹರ ಸೇವೆಗೆ ಬೆಳ್ತಂಗಡಿ ಲಯನ್ಸ್ ತೆರೆದುಕೊಂಡಿದೆ-ವಲಯಾಧ್ಯಕ್ಷ ದಿನೇಶ್

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗದ ಹಾವಳಿ: ಅಪಾರ ಅಡಿಕೆ ಗಿಡ, ಬಾಳೆ ಗಿಡಗಳಿಗೆ ಹಾನಿ

Suddi Udaya

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

Suddi Udaya

ಬಂಗಾಡಿ ಬಿಎಸ್ಎನ್ಎಲ್ ನೆಟ್ವರ್ಕ್ಸ್ ಸಮಸ್ಯೆಯಿಂದ ಗ್ರಾಹಕರು ಕಂಗಾಲು: ಸಂಬಂಧ ಪಟ್ಟವರು ನೆಟ್ವರ್ಕ್ಸ್ ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಗುರುವಾಯನಕೆರೆ ಮಂಜುಬೆಟ್ಟುವಿನಲ್ಲಿ ಎಫ್.ಎಮ್ ಗಾರ್ಡನ್ & ಕನ್ವೆನ್ಶನ್ ಎ.ಸಿ ಸಭಾಂಗಣ ಉದ್ಘಾಟನೆ

Suddi Udaya
error: Content is protected !!