22.6 C
ಪುತ್ತೂರು, ಬೆಳ್ತಂಗಡಿ
July 23, 2026
ಚಿತ್ರ ವರದಿನಿಧನ

ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾದ ಮಾಚಾರು ಗೋಪಾಲ ನಾಯ್ಕ ನಿಧನ

ಬೆಳ್ತಂಗಡಿ: ಜನಪದ ಸಂದಿ ಪಾಡ್ದನದಲ್ಲಿ ಪ್ರಖ್ಯಾತರಾಗಿದ್ದ, ಮಾಚಾರು ಗೋಪಾಲ ನಾಯ್ಕ(88 ವಷ೯) ಎ.24 ರಂದು ನಿಧನರಾದರು.
ಜನಪದ ಸಂದಿ ಹೇಳುವುದರಲ್ಲಿ ಪ್ರಖ್ಯಾತ ರಾಗಿದ್ದ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತ ರಾಗಿದ್ದರು.

ಅವರು ಸೃಜಿಸಿರುವ ಸಿರಿ ಕಾವ್ಯದ ಎರಡು ಪಠ್ಯಗಳಿವೆ. ಮೊದಲನೆಯದು ಅವರು ಹಾಡಿದ ಪಠ್ಯ. 15,683 ಸಾಲುಗಳಿರುವ ದೀರ್ಘ ಪಠ್ಯ. ಎರಡನೆಯದು ಅವರು ಬರೆದುಕೊಳ್ಳಲು ಅನುಕೂಲವಾಗುವಂತೆ ಹೇಳಿದ ಪಠ್ಯ. ಇದು ಹಾಡಿದ ಪಠ್ಯದ ಅರ್ಧದಷ್ಟಿದೆ. ಹಾಡಿದ ಮತ್ತು ಹೇಳಿದ ಎರಡು ಪಠ್ಯಗಳು ನಾಯ್ಕ ಅವರ ಹೆಸರಿನಲ್ಲಿ ಮಾತ್ರ ಇವೆ. ತೌಲನಿಕ ಅಧ್ಯಯನಕ್ಕೆ ಮತ್ತು ಕಾವ್ಯ ನಿರ್ಮಾಣದ ನೆಲೆಗಳನ್ನು ಶೋಧಿಸುವುದಕ್ಕೆ ಅವರ ಈ ಎರಡು ಪಠ್ಯಗಳು ಸಹಾಯಕವಾಗಿವೆ.ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ ಶಾಖೆ” ಉದ್ಘಾಟನೆ

Suddi Udaya

ಲಾಯಿಲ: ಗುಡ್ಡ ಜರಿದು ರಸ್ತೆ ಸಂಪರ್ಕ ಕಡಿತ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಕಿಯಿಲ್ಲದ ಅಡುಗೆ ಸ್ಪರ್ಧೆ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸಲು ಸರಕಾರದ ಗಮನ ಸೆಳೆಯುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗೆ ಮನವಿ

Suddi Udaya

ಕಲ್ಮಂಜ: ಅಲೆಕ್ಕಿ ನಿವಾಸಿ ಗೀತಾ ನಿಧನ

Suddi Udaya

ಕಣಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ನವಿಲು ಸಾವು

Suddi Udaya
error: Content is protected !!