ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಭಾಗವತ ಸಪ್ತಾಹ’

Suddi Udaya

ತೆಂಕಕಾರಂದೂರು: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಸಂತ ದ್ವಾದಶಿ ಪ್ರಯುಕ್ತ ಶ್ರೀ ವಿಷ್ಣು ದೇವರಿಗೆ ಸೀಯಾಳ ಅಭಿಷೇಕ, ತುಳಸಿ ಅರ್ಚನೆ, ಪ್ರಸನ್ನ ಪೂಜೆ, ಹಾಗೂ ಸಂಜೆ 7 ಗಂಟೆಗೆ ವಸಂತ ಪೂಜೆ ಮೇ. 2 ರಂದು ನಡೆಯಲಿದೆ.

ಮೇ.3 ರಂದು ವೈಶಾಖ ಶುದ್ಧ ತ್ರಯೋದಶಿಯಿಂದ ಮೇ. 9 ವೈಶಾಖ ಶುದ್ಧ ಚತುರ್ಥಿ ವರೆಗೆ ಭಾಗವತ ಸಪ್ತಾಹವು ಪ್ರವಚನಕಾರರಾಗಿ ವೇದಮೂರ್ತಿ ಶ್ರೀ ಶಶಾಂಕ ಭಟ್ ಬಳೆಂಜ ರವರಿಂದ ನಡೆಯಲಿದೆ ಎಂದು ಅರ್ಚಕ ರಾಮಚಂದ್ರ ಉಪಾಧ್ಯಾಯರು ತಿಳಿಸಿದ್ದಾರೆ.

Leave a Comment

error: Content is protected !!