ವಲಯ ತರಬೇತುದಾರರಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 5 ಮಂದಿ ಆಯ್ಕೆ

Suddi Udaya

ಬೆಳ್ತಂಗಡಿ : 2022 ರಲ್ಲಿ ನಡೆದ ಜೆಸಿಐ ಭಾರತದ ವಲಯ XV ರ, ವಲಯ ತರಬೇತುದಾರರ ಆಯ್ಕೆ ಶಿಬಿರದಲ್ಲಿ ಜೆಸಿಐ ಬೆಳ್ತಂಗಡಿಯ ಪ್ರಸ್ತುತ ವರ್ಷದ ಅಧ್ಯಕ್ಷರಾದ ಶಂಕರ್ ರಾವ್, ಕಾರ್ಯದರ್ಶಿ ಸುಧೀರ್ ಕೆ. ಎನ್, ಉಪಾಧ್ಯಕ್ಷರುಗಳಾದ ಹೇಮಾವತಿ ಕೆ, ರಂಜಿತ್ ಎಚ್. ಡಿ ಮತ್ತು ಮಹಿಳಾ ವಿಭಾಗದ ನಿರ್ದೇಶಕರಾದ ಸುಭಾಷಿಣಿ ಇವರುಗಳು ಪಾಲ್ಗೊಂಡು ಒಂದು ವರ್ಷಗಳ ಕಾಲ ಮುಖ್ಯ ತರಬೇತುದಾರರು ನೀಡಿದ ಅಸೈನ್ಮೆಂಟ್ ನ್ನು ಪೂರ್ಣಗೊಳಿಸಿ ವಲಯ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ.

ಇವರ ಸಾಧನೆಗೆ ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ. ಎಸ್ ಮತ್ತು ಪೂರ್ವಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!