July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯ

ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ರವರಿಂದ ರೋಡ್ ಶೋ: ಗಣ್ಯರ ಭೇಟಿ

ಬೆಳ್ತಂಗಡಿ; ಜನತಾದಳ ಜಾತ್ಯಾತೀತ ಪಕ್ಷದ ಬೆಳ್ತಂಗಡಿ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಬೆಳ್ತಂಗಡಿ ತಾಲೂಕಿನ ಪ್ರಮುಖ ನಗರಗಳಲ್ಲಿ ಮತಯಾಚನೆಯ ರೋಡ್ ಶೋ ನಡೆಸಿದರು.
ಜೊತೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಜಕೀಯ ಪ್ರಮುಖರ, ಹಿರಿಯ ಕಾರ್ಯಕರ್ತರ ಭೇಟಿ ಮುಂದುವರಿಸಿದರು.

ಮಡಂತ್ಯಾರು, ಮದ್ದಡ್ಕ, ಸಬರಬೈಲು, ಕೊಲ್ಪೆದಬೈಲು, ಕುಪ್ಪೆಟ್ಟಿ, ಕಲ್ಲೇರಿ, ಕರಾಯ, ಗೇರುಕಟ್ಟೆ, ಉಜಿರೆ ಅತ್ತಾಜೆ, ಟಿ.ಬಿ ಕ್ರಾಸ್, ಕಿಲ್ಲೂರು, ಕಾಜೂರು, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ಅಣಿಯೂರು, ಬೆಳ್ತಂಗಡಿ ನಗರ, ಮುಂತಾದೆಡೆ ರೋಡ್ ಶೋ ನಡೆಸಿದರು.

ಧ್ವನಿವರ್ಧಕದ ಮೂಲಕ ತಾಲೂಕಿನ ಮೂಲೆಮೂಲೆಗಳಲ್ಲಿ ನಿರಂತರ ಪ್ರಚಾರ ಕಾರ್ಯ ನಡೆಯುತ್ತಿದೆ‌. ಅಭ್ಯರ್ಥಿಯಾಗಿರುವ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಸ್ವಪರಿಚಯ ಇರುವ ಕರಪತ್ರ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ನೀಡುವ ಸೌಲಭ್ಯಗಳ ಪ್ರಣಾಳಿಕೆ, ಮಾದರಿ ಮತಪತ್ರಗಳನ್ನು ಹಂಚಿಕೆ ಮಾಡಲಾಯಿತು.

ಸೋಮವಾರ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಮಂಗಳವಾರ ಸಂಜೆಯವರೆಗೂ ಮನೆ ಮನೆ ಭೇಟಿಗೆ ಯೋಜನೆ ರೂಪಿಸಲಾಗಿದೆ. ಪಕ್ಷದ ಕಾರ್ಯಾಧ್ಯಕ್ಷ ರಾಮ ಆಚಾರಿ, ಸಂಘಟನಾ ಕಾರ್ಯದರ್ಶಿ ಹೆಚ್.ಎನ್ ನಾಗರಾಜ್, ಹಿರಿಯರಾದ ಪ್ರಕಾಶ್ ಹೆಬ್ಬಾರ್ ಅರಸಿನಮಕ್ಕಿ, ಹಿರಿಯ‌ ಸಂಘಟಕರಾದ ಮುಂಡಾಜೆ ಸಹಕಾರಿ ಸಂಘದ ನಿರ್ದೇಶಕ ಸಂಜೀವ ಗೌಡ, ರಾಮಕೃಷ್ಣ ಗೌಡ ನೆರಿಯ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಂಡಸಾಲೆ, ಕಾರ್ಯದರ್ಶಿ ಶಾಹಿದ್ ಪಾದೆ, ಪುನೀತ್ ಪೂಜಾರಿ, ವಸಂತ ಪೂಜಾರಿ, ಅಮ್ಮಿ‌ ನಾಯ್ಕ, ಸಂಜೀವ ಕುಲಾಲ್, ಲುಕ್ಮಾನುಲ್ ಹಕೀಂ ಧರ್ಮಸ್ಥಳ, ಹಂಝ, ಇಬ್ರಾಹಿಂ ಕನ್ಯಾಡಿ, ರಾಮ ಕುಮಾರ್, ರಿಝ್ವಾನ್, ಆಸಿಫ್, ಶರೀಫ್, ಮುಹಮ್ಮದ್ ಕಾಜೂರು, ಸಿರಾಜ್, ಕಿಟ್ಟ, ಮೊದಲಾದವರು ಭಾಗಿಯಾಗಿದ್ದರು.

Related posts

ಉಜಿರೆ ಕು| ಸೌಜನ್ಯಳ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ನಗರ ಸಮಿತಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya

ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಚಾರ್ ನ ಯತೀಮ್ ಕುಟುಂಬಕ್ಕೆ ಮನೆಯ ಕೀ ಹಸ್ತಾಂತರ

Suddi Udaya

ನಾಳೆ (ಜು.23) ದ.ಕ.ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

Suddi Udaya

ಬೆಂಗಳೂರಿನ ಪ್ರಸಿದ್ದ ಕೈಗಾರಿಕೋದ್ಯಮಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ಅಂತರರಾಷ್ಟ್ರೀಯ ಆರ್ಯಭಟ- 2024 ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!