ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ತೋಟತ್ತಾಡಿಯ ವ್ಯಕ್ತಿಯ ಶವ ಉಜಿರೆ ರಸ್ತೆ ಬದಿಯಲ್ಲಿ ಪತ್ತೆ

Suddi Udaya

ಉಜಿರೆ : ‌ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ವ್ಯಕ್ತಿಯೋರ್ವರು ರಸ್ತೆ ಬದಿಯಲ್ಲಿ ಮೃತ ಪಟ್ಟ ಘಟನೆ ‌ಮೇ 8ರಂದು‌ ಉಜಿರೆಯಲ್ಲಿ ನಡೆದಿದೆ.
‌ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ರಾಮ ಮುಗೇರ (50ವ.) ಮೃತ ಪಟ್ಟವರಾಗಿದ್ದಾರೆ .

ರಾಮ ಮುಗೇರವರು ಈ ದಿನ ಬೆಳಿಗ್ಗೆ 8ಕ್ಕೆ ಪೇಟೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಉಜಿರೆ ಗ್ರಾಮದ ಅನುಗ್ರಹ ಶಾಲೆಯ ಬಳಿ ಅವರ ಶವ ‌ಪತ್ತೆಯಾಗಿದೆ. ಅಮಲು ಪದಾರ್ಥ ಸೇವಿಸುವ ಅಭ್ಯಾಸವನ್ನು ಹೊಂದಿರುವ ಅವರು ಅನುಗ್ರಹ ಶಾಲಾ ಬಳಿ ಬಸ್ಸಿನಿಂದ ಇಳಿದು ರಸ್ತೆ ಬದಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ಸಮಯ ಬಾಯಾರಿಕೆಗೆ ಕುಡಿಯಲು ನೀರು ಸಿಗದೇ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೃತರ ಪತ್ನಿ ಶ್ರೀಮತಿ ಗುಲಾಬಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

error: Content is protected !!