September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರಿಂಜೆ : ಮಿಲಾದ್ ಆಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮ

ವೇಣೂರು : ನೂರುಲ್ ಹುದಾ ಅರೆಬಿಕ್ ಮದ್ರಸ ಪೆರಿಂಜೆ ಇದರ ಸಭಾಂಗಣದಲ್ಲಿ ಮಿಲಾದ್ ಆಚರಣೆಯ ಪ್ರಯುಕ್ತ ಪೆರಿಂಜೆ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮವು ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಸ್ವಾದಿಕ್ ಪೆರಿಂಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಪಡ್ದಂದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿ ಖತೀಬ್ ಅಶ್ರಫ್ ಫೈಝಿ ಅರ್ಕಾಣ ರವರು ಉದ್ಘಾಟಿಸಿದರು.

ಯಾಕೂಬ್ ಪೆರಿಂಜೆಯವರು ಆಸಂಶ ಮಾಡಿದ ನಂತರ ಸಭೆಯಲ್ಲಿ ಖತೀಬ್, ಸದರ್, ಮತ್ತು ನೂರುಲ್ ಹುಧಾ ಜುಮ್ಮಾ ಮಸೀದಿ ಪಡ್ಡಂದಡ್ಕ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ,ಹಿರಿಯರಾದ ಪಿ.ಉಸ್ಮಾನ್ ರವರನ್ನು ಸನ್ಮಾನಿಸಲಾಯಿತು. ಝೈನುದ್ದೀನ್, ಅಬೂಬಕ್ಕರ್, ರಫೀಕ್, ಹನೀಫ್, ಅಬ್ದುಲ್ ಖಾದರ್ ಮತ್ತು ಜಮಾತ್ ಬಾಂದವರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಬಿ ವಿ ಅಧ್ಯಕ್ಷ ಅಫ್ಲಳ್ ಕಿರಾಅತ್ ಪಠಿಸಿದರು. ಕಾರ್ಯಕ್ರಮದ ರೂವಾರಿ ಅಲ್ತಾಫ್ ಮುಸ್ಲಿಯಾರ್ ಸದರ್ ಮುಅಲ್ಲಿಂ ನೂರುಲ್ ಹುದಾ ಮದ್ರಸ ಪೆರಿಂಜೆಯವರು ಪ್ರಾಸ್ತಾವಿಕವಾಗಿ ಮಾತಾಡಿದರು. ಸ್ವಾದಿಕ್ ಪೆರಿಂಜೆಯವರು ಸ್ವಾಗತಿಸಿದರು.

Related posts

ಉಜ್ವಲ ಯೋಜನೆಯ ಮಹಿಳೆಯರ ಮೇಲೂ, “ಬೆಲೆ ಏರಿಕೆಯ ಬರೆ ಎಳೆದ” ಕೇಂದ್ರ ಸರ್ಕಾರ: ರಕ್ಷಿತ್ ಶಿವರಾಂ

Suddi Udaya

ಮದ್ದಡ್ಕ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಭಾರೀ ಗಾಳಿ ಮಳೆ: ಪಡಂಗಡಿ ವ್ಯಾಪ್ತಿಯಲ್ಲಿ ಮನೆ ಮೇಲೆ ಹಾಗೂ ರಸ್ತೆಗೆ ಬಿದ್ದ ಮರ : ಅಪಾರ ಹಾನಿ

Suddi Udaya

ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಉಜಿರೆಯಲ್ಲಿ ಭವ್ಯ ಸ್ವಾಗತ: ಶ್ರೀಗಳಿಂದ ಜನಾರ್ದನ ದೇವರ ದರ್ಶನ,ಸ್ವಾಮೀಜಿಯವರಿಗೆ ಪೌರ ಸನ್ಮಾನ: ಕೇರಳ ಶೈಲಿಯ ಚಂಡೆ ವಾದನ, ವಯೊಲಿನ್, 22 ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನದೊಂದಿಗೆ ಮೆರವಣಿಗೆ

Suddi Udaya

ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ: ಅಧ್ಯಕ್ಷರಾಗಿ ಸರಸ್ವತಿ ಎ., ಉಪಾಧ್ಯಕ್ಷರಾಗಿ ಸಜಿತ

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya
error: Content is protected !!