ಮೇ 26: ಯೂತ್ ಮತ್ತು ಸಾಮಾಜಿಕ ಕಾಳಜಿಗಳ ಕುರಿತು ರಾಷ್ಟ್ರೀಯ ಸಮ್ಮೇಳನ “ಸಂಭ್ರಮ-2023”

Suddi Udaya

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜು ಉಜಿರೆಯಲ್ಲಿ ಸಾತ್ನಕೋತ್ತರ ಅಧ್ಯಯನ ಮತ್ತು ಸಂಶೋಧನೆ ವಿಭಾಗದ ಆಯೋಜನೆಯಲ್ಲಿ ಒಂದು ದಿನದ ಯೂತ್ ಮತ್ತು ಸಾಮಾಜಿಕ ಕಾಳಜಿಗಳ ರಾಷ್ಟ್ರೀಯ ಸಮ್ಮೇಳನ ಕುರಿತು ಸಂಭ್ರಮ-2023 ಕಾರ್ಯಕ್ರಮವು ಮೇ 26 ರಂದು ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರು ಬಿ ಎ ಕುಮಾರ್ ಹೆಗ್ಡೆ, ಸಮ್ಮೇಳನದ ಸಲಹೆಗಾರರಾಗಿ ಎಸ್.ಡಿ.ಎಂ. ಸ್ನಾತಕೋತ್ತರ ಕಾಲೇಜಿನ ಡೀನ್ ಡಾ. ವಿಶ್ವನಾಥ್ ಪಿ, ಸಂಚಾಲಕರಾಗಿ ಸ್ನಾತಕೋತ್ತರ ಕಾಲೇಜಿನ ಹೆಚ್.ಒಡಿ ರವಿಶಂಕರ್ ಕೆ.ಆರ್, ಸಂಘಟನಾ ಕಾರ್ಯದರ್ಶಿಗಳು , ಹಾಗೂ ಸಂಘಟನಾ ಸಮಿತಿಯವರು ಭಾಗವಹಿಸುವರು.

ಸಂಭ್ರಮ-2023 ರಲ್ಲಿ ಪೇಪರ್ ಪ್ರೆಸೆಂಟೇಶನ್,ವಿವಿಧ ಚಟುವಟಿಕೆಗಳ ಪ್ರದರ್ಶನ,ಇ-ಪೋಸ್ಟರ್ ಮಾರ್ಕೆಟಿಂಗ್ ವಿಷಯಗಳ ಬಗ್ಗೆ ಮಾಹಿತಿ ಸಿಗಲಿದೆ.

Leave a Comment

error: Content is protected !!