ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಮಹಿಳಾ ಕಾಂಗ್ರೆಸ್‌ನಿಂದ ದೂರು

Suddi Udaya

ಬೆಳ್ತಂಗಡಿ: ಚುನಾವಣಾ ಫಲಿತಾಂಶದ ಬಳಿಕ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರವರ ಬಗ್ಗೆ ಅಶ್ಲೀಲ ಪದಗಳನ್ನು ಉಪಯೋಗಿಸಿ ಘೋಷಣೆ ಕೂಗಿದ್ದಾರೆ ಎಂದು ಹಾಗೂ ಬಿಜೆಪಿ ಕಾರ್ಯಕರ್ತನೊಬ್ಬ ಓಂ ಶಾಂತಿ ಎಂದು ಬರೆದಿದ್ದಾರೆ ಎಂದು ಆರೋಪಿಸಿ ಇವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಹಾಗೂ ರಕ್ಷಿತ್ ಶಿವರಾಂ ಅಭಿಮಾನಿ ಬಳಗ ವತಿಯಿಂದ ಬೆಳ್ತಂಗಡಿ ವೃತ್ತ ನಿರೀಕ್ಷರಿಗೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ , ಕಾರ್ಯದರ್ಶಿ ಸೌಮ್ಯ ಲಾಯಿಲ , ಜೆಸಿಂತಾ ಮೋನಿಸ್ , ತಾ.ಪಂ ಸದಸ್ಯರಾದ ವಿನುಷ ಪ್ರಕಾಶ್ , ಜಯಶೀಲ ಶಿರ್ಲಾಲು , ಗೋಪಿನಾಥ್ ನಾಯಕ್ , ಕಾಂಗ್ರೆಸ್ ಮುಖಂಡರಾದ ಜಯಲಕ್ಷ್ಮೀ ಶಿರ್ಲಾಲು , ಯಶೋಧ ಕುತ್ಲೂರು , ಪ್ರಕಾಶ್ ಅಳದಂಗಡಿ , ಸಚಿನ್ ನೂಜೋಡಿ , ಸುಧೀರ್ ದೇವಾಡಿಗ , ಪೀತಂ ಶೆಟ್ಟಿ ಉಜಿರೆ , ಗೀತಾ ಬಂದಾರು , ಸುಚಿತ್ರಾ ಕೊಳ್ಳಜೆ , ಗಫೂರು ಪುದುವೆಟ್ಟು , ನೀಲಮ್ಮ ಪುದುವೆಟ್ಟು , ಮಧುರ ಮೇಲಂತಬೆಟ್ಟು , ಲಿಯೋ ಪಿರೆರಾ , ಸುರೇಶ್ ಸುವರ್ಣ , ಸಿದ್ದಿಕ್ ಮಲೆಬೆಟ್ಟು , ರಾಘವ ಗೇರುಕಟ್ಟೆ , ಪ್ರವೀಣ್ ಪೆರ್ನಾಂಡೀಸ್ , ಜಗದೀಶ್ ಬೆಳ್ತಂಗಡಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Leave a Comment

error: Content is protected !!