24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಭಶ್ರೀ ಕಾಲೇಜು ವಿದ್ಯಾರ್ಥಿಗಳ 2K25: ಎಕ್ಸ್‌ಪ್ಲೋರಿಯಾ


ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ 2025 ಸಾಲಿನ ವಾರ್ಷಿಕ ಕಾರ್ಯಕ್ರಮಗಳು ಈ ಬಾರಿ ಕ್ರೀಡೆಯೂ ಸಂಸ್ಕೃತಿಯೂ ಎರಡು ದಿನ ಅದ್ದೂರಿಯಾಗಿ ಜರುಗಿದವು. ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್. ಕಾರ್ಯಕ್ರಮದ ಅಧ್ಯಕ್ಷತೆಯೊಂದಿಗೆ, ಸಂಸ್ಥೆಯ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಅವರ ಸಮಗ್ರ ಸಂಯೋಜನೆ, ಅತಿಥಿ ಸ್ವಾಗತ ಮತ್ತು ಮಾರ್ಗದರ್ಶನದಿಂದ ಈ ಉತ್ಸವ ಮೆರಗುಗೊಂಡಿತು.

ಡಿ.18ರಂದು ಉದ್ಘಾಟಕರಾಗಿ ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರ್, ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಆಗಮಿಸಿದರು.
ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಮನೋಜ್ ಎಸ್. ಧನ್ಯವಾದವಿತ್ತರು.

ಡಿ.19ರಂದು ಕುಂಭಶ್ರೀ ಕ್ಯಾಂಪಸ್‌ನಲ್ಲಿ ಎಕ್ಸ್‌ಪ್ಲೋರಿಯಾ 2K25 ಸಾಂಸ್ಕೃತಿಕ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಶಿಧರ್ ಡಿ. ಉದ್ಯಮಿ (ಹಾಸನ) , ಸುರೇಶ್ ಪೂಜಾರಿ ಕೃಷಿಕ, ಉಪಸ್ಥಿತರಿದ್ದರು. ದಿನದ ವಿಶೇಷತೆಯನ್ನು ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಭಿಲಾಶ್ ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಸಂತೋಷ್ ನಿಭಾಯಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳ ವೈವಿಧ್ಯ, ಫುಡ್ ಫೆಸ್ಟ್ , ಟ್ರೆಶರ್ ಹಂಟ್ , ರಂಗೋಲಿ , ಥೀಮ್ ಪರ್ಫಾರ್ಮೆನ್ಸ್ , ಪಾಟ್ ಪೈಂಟಿಂಗ್ , ವೀಡಿಯೋಗ್ರಫಿ ಹಾಗೂ ಇತರೆ ಪ್ರತಿಭಾ ಪ್ರದರ್ಶನಗಳು, ವಿಜೇತರಿಗೆ ಪದಕ–ಪ್ರಮಾಣಪತ್ರಗಳು ಪ್ರದಾನಿಸಲಾಯಿತು.

ಸಮಾರೋಪದ ಮುಖ್ಯ ಅತಿಥಿಯಾಗಿ ಕೃಷಿಕ ಜಾನ್ ಲಿನು ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು.
ದ್ವಿದಿನ ಕಾರ್ಯಕ್ರಮಕ್ಕೆ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲಿಖಿತಾ ಎಂ. ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರಣ್ಯ ಕೆ.ಎಸ್. ಸಮರ್ಥ ನಿರೂಪಣೆ ನೀಡಿದರು.
ಎಲ್ಲ ವಿಭಾಗಗಳ ಪ್ರದರ್ಶನ, ಸಾಧನೆ, ಹಾಗೂ ತಂಡ ಸ್ಫೂರ್ತಿಗೆ ಮೆರಗು ತುಂಬುವಂತೆ, ಒಟ್ಟಾರೆ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ಸಂಯುಕ್ತವಾಗಿ ಪ್ರದಾನ ಮಾಡಲಾಯಿತು.

Related posts

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿ ನೂತನ ಜಮಾತ್ ಕಮಿಟಿ ರಚನೆ: ನವಾಝ್ ಶರೀಫ್ ಕಟ್ಟೆ 3 ನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ

Suddi Udaya

ಕನ್ಯಾಡಿ ಸೇವಾಧಾಮಕ್ಕೆ ಬೆಂಗಳೂರಿನ ಕೆಮ್ ಟ್ರೆಂಡ್ ಕಂಪೆನಿಯ ಭೇಟಿ

Suddi Udaya

ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಾನಕ್ಕೆ ಬೆಳ್ಳಿ ರಥ ಸಮರ್ಪಣೆ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಗೌರವಾರ್ಪಣೆ

Suddi Udaya

ಅಖಿಲ ಭಾರತ ವೃತ್ತಿ ಪರೀಕ್ಷೆ: ಎಸ್‌ಡಿಎಂ ಮಹಿಳಾ ಐಟಿಐ ಸಂಸ್ಥೆಗೆ ಶೇ.100 ಫಲಿತಾಂಶ

Suddi Udaya

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

Suddi Udaya

ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಗುರುವಾಯನಕೆರೆಯ ಕೆರೆ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!