ಧರ್ಮಸ್ಥಳ: ಮಗನನ್ನು ರಕ್ಷಿಸಲು ಹೋಗಿ ತಂದೆ ನೀರುಪಾಲು

Suddi Udaya

Updated on:

ಧರ್ಮಸ್ಥಳ: ಮಗನನ್ನು ರಕ್ಷಿಸಲು ಹೋಗಿ ತಂದೆ ನೀರುಪಾಲಾಗಿರುವ ಘಟನೆ ಮೇ.15 ರಂದು ನೇತ್ರಾವತಿ ನದಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಸ್ನಾನಕ್ಕೆಂದು ನದಿ ನೀರಿಗೆ ಇಳಿದಿದ್ದ ವೇಳೆ ಮಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದು ಮಗನನ್ನು ರಕ್ಷಿಸಲು ಹೋದ ತಂದೆ ನೀರುಪಾಲಾಗಿದ್ದು ಮುಳುಗು ತಜ್ಞ ಹರೀಶ್ ಕೂಡಿಗೆ, ಸಂಜೀವ, ರವೀಂದ್ರ, ಸಂತೋಷ್ ಮಾಚಾರ್, ಅವಿನಾಶ್ ಶೆಟ್ಟಿ ನೇತ್ರಾವತಿ, ಇವರು ಕರೆ ಮಾಡಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಾಹಣ ತಂಡದ ಮಾಸ್ಟರ್ ಸ್ನೇಕ್ ಪ್ರಕಾಶ್ ರವರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಯೋಜನಾಧಿಕಾರಿ ಜಯವಂತ್ ಪಟಗಾರ್ ರವರ ಮಾರ್ಗದರ್ಶನದಲ್ಲಿ ಮೃತದೇಹ ಸಿಕ್ಕಿದ್ದು ಮೇಲಕ್ಕೆ ಎತ್ತಿ ಧರ್ಮಸ್ಥಳ ಠಾಣೆ ಪೊಲೀಸ್ ಮುಕೇನಾ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ಈ ಸಂದರ್ಭದಲ್ಲಿ ನಳಿನ್ ಕುಮಾರ್ ಹರೀಶ್ ಕೂಡಿಗೆ ಸಂತೋಷ್ ಮಾಚಾರ್ ರವೀಂದ್ರ ರಾಘವೇಂದ್ರ, ಸಂದೇಶ್, ಸುಲೈಮಾನ್ ಬೆಳಾಲು, ಸ್ನೇಕ್ ಪ್ರಕಾಶ್, ಸಂಜೀವ ಸಹಕರಿಸಿದರು.

Leave a Comment

error: Content is protected !!