ಅಭಯ ಹಾಸ್ಪಿಟಲ್ ನಲ್ಲಿ ನೇತ್ರ ಚಿಕಿತ್ಸಾ ಸೇವೆ ಪ್ರಾರಂಭ

Suddi Udaya

ಬೆಳ್ತಂಗಡಿ : ಇಲ್ಲಿಯ ಜೈನ್ ಪೇಟೆಯಲ್ಲಿರುವ ಅಭಯ ಹಾಸ್ಪಿಟಲ್ ನಲ್ಲಿ ನೇತ್ರ ಚಿಕಿತ್ಸಾ ವಿಭಾಗ ಮೇ 17ರಂದು ಶುಭಾರಂಭಗೊಂಡಿದೆ.

ಅಳದಂಗಡಿ ಅರಮನೆಯ ಅರಸರಾದ ಪದ್ಮ ಪ್ರಸಾದ್ ಅಜೀಲರು ನೇತ್ರ ಚಿಕಿತ್ಸಾ ವಿಭಾಗ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೇತ್ರ ತಜ್ಞ ಎಂ. ಬಿ. ಬಿ. ಎಸ್. ಎಂ. ಎಸ್ ಡಾ| ಕೀರ್ತನ್ ರಾವ್, ಅಭಯ ಹಾಸ್ಪಿಟಲ್ ವೈದ್ಯಾಧಿಕಾರಿ ಡಾ| ಶ್ರೀಹರಿ, ಡಾ| ವಿದ್ಯಾ, ಇತರ ವೈದ್ಯಾಧಿಕಾರಿಗಳು, ಸಿಬಂದಿ ವರ್ಗ,ಉಪಸ್ಥಿತರಿದ್ದರು.

ಇಲ್ಲಿ ಪ್ರತೀ ಬುಧವಾರ ಸಂಜೆ 4ರಿಂದ 6, ಶನಿವಾರ ಮದ್ಯಾಹ್ನ 2ರಿಂದ ಸಂಜೆ 6,ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5.30ರ ವರೆಗೆ ಕಣ್ಣಿನ ತಪಾಸಣೆಗೆ ಲಭ್ಯರಿರುತ್ತಾರೆ.

Leave a Comment

error: Content is protected !!