ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

Suddi Udaya

ಕೊಕ್ಕಡ : ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಸಾಮಾನ್ಯ ಸಭೆಯು ಕೊಕ್ಕಡ ಮರಿಯಾಕ್ರಪಾ ಕಚೇರಿಯಲ್ಲಿ ಮೇ. 23 ರಂದು ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು.

ವಲಯ 15 ವಲಯಾಡಳಿತ ಸಮಿತಿ ಸಭೆಯನ್ನು ಕೊಕ್ಕಡ ಘಟಕದ ಆತಿಥ್ಯದಲ್ಲಿ ಮೇ. 28 ರಂದು ನಡೆಸಲು ನಿರ್ಧರಿಸಲಾಯಿತು.

ಜೂನ್ ತಿಂಗಳಲ್ಲಿ ಬ್ರಹತ್ ರಕ್ತದಾನ ಶಿಬಿರ, ರಕ್ತದಾನಿಗಳಗೆ ಅಭಿನಂದನೆ ನಡೆಸುವುದು. ಜೇಸಿ ಫೌಂಡೇಶನಿಗೆ ಹೆಚ್. ಜಿ.ಎಫ್. ಕೊಡುಗೆಯನ್ನು ನೀಡುವುದು, ಊರಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ, ಮಧ್ಯಂತರ ಸಮ್ಮೇಳನದಲ್ಲಿ ಭಾಗವಹಿಸುವುದು. ನೂರರಷ್ಟು ಶೇಕಡಾ ಫಲಿತಾಂಶ ಸಾಧಿಸಿದ ಪ್ರೌಢ ಶಾಲೆಗಳಿಗೆ ಅಭಿನಂದನೆ ಸಮರ್ಪಣೆ, ಕ್ಯಾನ್ಸರ್ ಪೀಡಿತ ಬಡ ಮಹಿಳೆಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ.

ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶುಭ ಹಾರೈಸಿದರು. ಯುವ ಜೇಸಿ ಶ್ರವಣ್ ವರದಿ ವಾಚಿಸಿದರು.

ಉಪಾಧ್ಯಕ್ಷರಾದ ಯು.ನರಸಿಂಹ ನಾಯಕ್, ಹರಿಶ್ಚಂದ್ರ ಆಚಾರ್ಯ, ಹಿರಿಯ ಸದಸ್ಯ ಜೋಸೆಫ್ ಪಿರೇರಾ ಸಲಹೆ ಸೂಚನೆಗಳನ್ನು ನೀಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ವಂದಿಸಿದರು.

Leave a Comment

error: Content is protected !!