September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

ಕೊಕ್ಕಡ : ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಸಾಮಾನ್ಯ ಸಭೆಯು ಕೊಕ್ಕಡ ಮರಿಯಾಕ್ರಪಾ ಕಚೇರಿಯಲ್ಲಿ ಮೇ. 23 ರಂದು ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್ ಪಿರೇರಾ ವಹಿಸಿದ್ದರು.

ವಲಯ 15 ವಲಯಾಡಳಿತ ಸಮಿತಿ ಸಭೆಯನ್ನು ಕೊಕ್ಕಡ ಘಟಕದ ಆತಿಥ್ಯದಲ್ಲಿ ಮೇ. 28 ರಂದು ನಡೆಸಲು ನಿರ್ಧರಿಸಲಾಯಿತು.

ಜೂನ್ ತಿಂಗಳಲ್ಲಿ ಬ್ರಹತ್ ರಕ್ತದಾನ ಶಿಬಿರ, ರಕ್ತದಾನಿಗಳಗೆ ಅಭಿನಂದನೆ ನಡೆಸುವುದು. ಜೇಸಿ ಫೌಂಡೇಶನಿಗೆ ಹೆಚ್. ಜಿ.ಎಫ್. ಕೊಡುಗೆಯನ್ನು ನೀಡುವುದು, ಊರಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ, ಮಧ್ಯಂತರ ಸಮ್ಮೇಳನದಲ್ಲಿ ಭಾಗವಹಿಸುವುದು. ನೂರರಷ್ಟು ಶೇಕಡಾ ಫಲಿತಾಂಶ ಸಾಧಿಸಿದ ಪ್ರೌಢ ಶಾಲೆಗಳಿಗೆ ಅಭಿನಂದನೆ ಸಮರ್ಪಣೆ, ಕ್ಯಾನ್ಸರ್ ಪೀಡಿತ ಬಡ ಮಹಿಳೆಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ.

ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಶುಭ ಹಾರೈಸಿದರು. ಯುವ ಜೇಸಿ ಶ್ರವಣ್ ವರದಿ ವಾಚಿಸಿದರು.

ಉಪಾಧ್ಯಕ್ಷರಾದ ಯು.ನರಸಿಂಹ ನಾಯಕ್, ಹರಿಶ್ಚಂದ್ರ ಆಚಾರ್ಯ, ಹಿರಿಯ ಸದಸ್ಯ ಜೋಸೆಫ್ ಪಿರೇರಾ ಸಲಹೆ ಸೂಚನೆಗಳನ್ನು ನೀಡಿದರು. ಕೋಶಾಧಿಕಾರಿ ಜಸ್ವಂತ್ ಪಿರೇರಾ ವಂದಿಸಿದರು.

Related posts

ಡಿ.16: ಮರೋಡಿ ಶಾರದಾಂಬ ಪ್ಲೇಯರ್ಸ್ ಆಶ್ರಯದಲ್ಲಿ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಪಂದ್ಯಾಟ, “ಸ್ಪಂದನಾ ಟ್ರೋಫಿ-2023”

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಸದಸ್ಯರಾಗಿ ಶಾಸಕ ಹರೀಶ್ ಪೂಂಜ ನಾಮನಿರ್ದೇಶನ

Suddi Udaya

ಭಾರತ್ ಸ್ಕೌಟ್ ಗೈಡ್ ರಾಜ್ಯ ಸಂಸ್ಥೆಯಿಂದ ಸನ್ಮಾನಿತಗೊಂಡ ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪೊಸಲಾಯಿ ಆಯ್ಕೆ

Suddi Udaya

ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಸುವನ್ನು ರಕ್ಷಿಸಿದ ಗೃಹ ರಕ್ಷಕ ದಳದ ಸಿಬ್ಬಂದಿ

Suddi Udaya
error: Content is protected !!