July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿಯ ಬಿ.ಕೆ ಧನಂಜಯ ರಾವ್ ರವರ ನೂತನ ಕಚೇರಿ ರಾವ್ ಅಸೋಸಿಯೇಟ್ಸ್ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿಯ ಖ್ಯಾತ ವಕೀಲರಾದ ಬಿ.ಕೆ ಧನಂಜಯ ರಾವ್ ಇವರ ರಾವ್ ಅಸೋಸಿಯೆಟ್ಸ್ ನೂತನ ವಕೀಲರ ಕಚೇರಿಯ ಉದ್ಘಾಟನಾ ಸಮಾರಂಭ ಮೇ 24 ರಂದು ಬೆಳ್ತಂಗಡಿಯ ಮಹಿಳಾ ವೃಂದದ ಕಟ್ಟಡದಲ್ಲಿ ನೆರವೇರಿತು.

ನೂತನ ಕಚೇರಿಯನ್ನು ಪಂಚ ದೀಪವನ್ನು ಬೆಳಗಿಸುವ ಮೂಲಕ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯ್ಕ , ಮಾಜಿ ಶಾಸಕ ಕೆ ವಸಂತ ಬಂಗೇರ, ಹಿರಿಯ ವಕೀಲರಾದ ಭಗೀರಥ ಜಿ, ಸುಬ್ರಹ್ಮಣ್ಯ ಸ್ಥಾನಿಕ ಸಭಾದ ಅಧ್ಯಕ್ಷ ರಾಧಕೃಷ್ಣ ರಾವ್ ನೆರವೇರಿಸಿ, ನೂತನ ಸಂಸ್ಥೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ ಎಸ್, ಕಾರ್‍ಯದರ್ಶಿ ಶೈಲೇಶ್ ಠೋಸರ್, ಕುಟುಂಬದ ಹಿರಿಯರಾದ ಬಿ.ಕೆ ಸುಬ್ಬರಾವ್, ನ್ಯಾಯವಾದಿಗಳಾದ ಮನೋಹರ ಕುಮಾರ್ ಇಳಂತಿಲ, ಸಂತೋಷ್ ಕುಮಾರ್, ವಿನಯ ಕುಮಾರ್, ನವೀನ್ ಬಿ.ಕೆ, ಶಿವಕುಮಾರ್, ಮೊದಲಾವದರು ಉಪಸ್ಥಿತರಿದ್ದರು.

ಈ ಸಂದರ್ಭ ಯಕ್ಷಗಾನ ಕಲಾವಿದ ಅಪಘಾತದಲ್ಲಿ ಮಲಗಿದ ಸ್ಥಿತಿಯಲ್ಲಿರುವ ವಿಷ್ಣು ಶರ್ಮ ಹಾಗೂ ಉಜಿರೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಮಹಿಳೆಗೆ ನಿಮಾರ್ಣವಾಗುತ್ತಿರುವ ಮನೆಗೆ ಧನಂಜಯ ರಾವ್ ಅವರು ಧನ ಸಹಾಯವನ್ನು ಹಸ್ತಾಂತರಿಸಿದರು.

ಬೆಳ್ತಂಗಡಿ ರಾವ್ ಅಸೋಸಿಯೇಟ್ಸ್ ನ ವಕೀರುಗಳಾದ ಬಿ.ಕೆ ಮಿಹಿರ್ ರಾವ್, ದಿನೇಶ್ ಶೆಟ್ಟಿ, ಆನಂದ ಕುಮಾರ್ ಎಂ.ಸಿ , ಶ್ರೀಮತಿ ದಕ್ಷಾ ಜೈನ್, ಕು| ರೇಶ್ಮಾ, ಶ್ರೀಮತಿ ಸೌಮ್ಯಲತಾ ಕೆ, ಕು| ಶ್ವೇತಾ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ರಾವ್ ಅಸೋಸಿಯೇಟ್ಸ್ ನ ಮಾಲಕ ಹಾಗೂ ಪ್ರಖ್ಯಾತ ನ್ಯಾಯವಾದಿ ಧನಂಜಯ್ ರಾವ್ ಮತ್ತು ಅವರ ಪತ್ನಿ ಶ್ರೀಮತಿ ಸೌಮ್ಯಲತಾ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಶಿರ್ಲಾಲು: “ಭವತಿ ಭಿಕ್ಷಾಂದೇಹಿ” ನಿಧಿ ಸಂಗ್ರಹ ಅಭಿಯಾನದ ಧನಸಹಾಯ ಹಸ್ತಾಂತರ

Suddi Udaya

ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಪ್ರಕರಣ: ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ ಖ್ಯಾತ ವಕೀಲ ಸಿ.ವಿ.ನಾಗೇಶ್

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸಂಸ್ಕೃತ ಸಂಘದ ಪದ ಪ್ರದಾನ

Suddi Udaya

ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ಬಾಲಕರ ತಂಡ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

Suddi Udaya

ಲಾಯಿಲದಲ್ಲಿ ನಡೆದಿರುವುದು ವಾಮಾಚಾರ ಅಲ್ಲ, ದೋಷ ಪರಿಹಾರದ ಪೂಜೆ

Suddi Udaya

ಮೂಡುಕೋಡಿ: ಕೊಪ್ಪದಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಟ್ರಸ್ಟ್ ವತಿಯಿಂದ ದೇಲoಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಮೃತ್ಯುoಜಯ ಹೋಮ

Suddi Udaya
error: Content is protected !!