April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಿಕ್‌ಆಪ್ ವಾಹನ ತಡೆಗಟ್ಟಿ: ಜೀವಬೆದರಿಕೆ ಒಡ್ಡಿದ ಆರೋಪ: ಮೆಸ್ಕಾಂ ಉದ್ಯೋಗಿ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು

ಬೆಳ್ತಂಗಡಿ: ಪಿಕ್‌ಆಫ್ ವಾಹನದಲ್ಲಿ ಹೋಗುತ್ತಿರುವ ಸಮಯ ಬೆಳ್ತಂಗಡಿ ಹುಣ್ಸೆಕಟ್ಟೆ ನಿವಾಸಿ ಅಭಿಷೇಕ್ ಎಂ. ಎಂಬಾತ ಬೈಕಲ್ಲಿ ಬಂದು ನನ್ನ ವಾಹಕ್ಕೆ ಅಡ್ಡವಾಗಿ ನಿಂತು, ಎಳೆದಾಡಿ, ಅವಾಚ್ಯವಾಗಿ ನಿಂದಿಸಿ, ಜಾತಿನಿಂದನೆಗೈದು ಕೊಲೆ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ, ಲಾಯಿಲ ಗ್ರಾಮದ ಅಜೆಕಲ್ಲು ನಿವಾಸಿ ಚಂದ್ರಕಾಂತ ಅವರು ಬೆಳಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಮೇ 30ರಂದು ಬೆಳಗ್ಗೆ 9 ಗಂಟೆಗೆ ಪಿಕ್‌ಆಪ್ ವಾಹನದಲ್ಲಿ ಕಸಬಾ ಗ್ರಾಮದ ಚರ್ಚ್ ರಸ್ತೆಯಿಂದ ಕೆಇಬಿ ರಸ್ತೆ ಕಡೆಗೆ ನಾನು ಹೋಗುತ್ತಿದ್ದಾಗ, ಪರಿಚಯಸ್ಥನಾದ ಅಭಿಷೇಕ್ ಎಂ. ಎಂಬಾತ ಇದ್ದಕ್ಕಿಂದ್ದಂತೆ ಬೈಕ್‌ನಲ್ಲಿ ಬಂದು ಪಿಕ್‌ಆಪ್‌ಗೆ ಅಡ್ಡಲಾಗಿ ಬಂದು ನಿಂತು ತಡೆದು ‘ನೀನು ಬಾರೀ ಹಾರಾಡುತ್ತೀಯ, ಹರೀಶ್ ಪೂಂಜನ ಚೇಲಾ ಶಶಿರಾಜ್ ಶೆಟ್ಟಿ ಜೊತೆ ಬಾರೀ ತಿರುಗಾಡುತ್ತಿಯ, ನಿನ್ನ ಶಶಿರಾಜ್‌ಗೆ ಏನು ಮಾಡಬೇಕೆಂದು ನನಗೆ ಗೊತ್ತು, ಅವರನ್ನು ಎಲ್ಲಿ ಮಟ್ಟ ಹಾಕಬೇಕು ಅಲ್ಲಿ ಮಟ್ಟ ಹಾಕುತ್ತೇನೆ’ ಎಂದು ಹೇಳಿ ಎಳೆದಾಡಿದಾಗ, ‘ಯಾಕೆ ಏನಾಗಿದೆ? ನನ್ನನ್ನು ಏನು ಮಾಡುತ್ತಿದ್ದಿಯಾ? ಎಂದು ನಾನು ಪ್ರಶ್ನಿಸಿದಾಗ, ಅಭಿಷೇಕ್, ಜಾತಿ ನಿಂದನೆ ಮಾಡಿ, ಮೆಸ್ಕಾಂನಲ್ಲಿ ಒಳ್ಳೆಯ ಕೆಲಸದಲ್ಲಿರುವ ನನ್ನ ಎದುರು ನಿಲ್ಲಲು ನಿನಗೆ ಯೋಗ್ಯತೆ ಇದೆಯೇ? ಎಂದು ಹೇಳಿ, ನಿನ್ನ ಮತ್ತು ಶಶಿರಾಜ್ ಶೆಟ್ಟಿಯ ಕೈಕಾಲು ಕೂಡ ಹೇಗೆ ಮುರಿದು ಮೂಲೆಗೆ ಕೂರಿಸಬೇಕು ಎಂದು ನನಗೆ ಗೊತ್ತು ಎಂದು ಕೊಲೆ ಬೆದರಿಕೆ ಒಡ್ಡಿರುವುದಾಗಿ ಚಂದ್ರಕಾಂತ್ ಅವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಚಂದ್ರಕಾಂತ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಅಕ್ರ 44/2023 ಯು/ಎಸ್ 341, 323,506 ಐಪಿಸಿ ಮತ್ತು ಕಲಂ 3(1) (ಎಸ್) ಎಸ್.ಸಿ,ಎಸ್.ಟಿ ಅಕ್ಟ್-2015ರಂತೆ ಪ್ರಕರಣ ದಾಖಲಾಗಿದೆ.

Related posts

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅ.8 ರಿಂದ ಅ.24 ರವರೆಗೆ ದಸರಾ ರಜೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ಮಕ್ಕಳ ಹಕ್ಕುಗಳ ಸಪ್ತಾಹ

Suddi Udaya

ಕಕ್ಕಿಂಜೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣ: ಆರೋಪಿ ಗದಗದ ರಾಜುಗೆ ಜೀವಾವಧಿ ಶಿಕ್ಷೆ ಪ್ರಕಟ

Suddi Udaya

ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ನಿಟ್ಟಡೆ ಕುಂಭಶ್ರೀ ಪ.ಪೂ. ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂ. 3 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya
error: Content is protected !!