ಮುಂಡಾಜೆ: ಚರಂಡಿಗೆ ಜಾರಿದ ಆಹಾರ ಉತ್ಪನ್ನಗಳ ಸಾಗಾಟದ ವಾಹನ

Suddi Udaya

ಮುಂಡಾಜೆ: ಬೆಂಗಳೂರಿದ ಮೂಡಬಿದ್ರೆ ಕಡೆ ಸಾಗುತ್ತಿದ್ದ ಆಹಾರ ಉತ್ಪನ್ನಗಳ ಸಾಗಾಟದ ವಾಹನ ರಸ್ತೆ ಬದಿಯ ಚರಂಡಿಗೆ ಜಾರಿದ ಘಟನೆ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಸೋಮಂತಡ್ಕ ತಿರುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

ಇದರಿಂದ ಹಲವು ಸಮಯ ಟ್ರಾಫಿಕ್ ಜಾಮ್ ಉಂಟಾಯಿತು. ಸ್ಥಳೀಯರಾದ ಸಚಿನ್ ಭಿಡೆ,ವಿಷ್ಣು ಪ್ರಸಾದ್ ಖಾಡಿಲ್ಕಾರ್, ಭರತ್, ಬಿಪಿನ್ ಜಾರ್ಜ್,ಗ್ರಾಪಂ ಸದಸ್ಯ ಜಗದೀಶ್ ನಾಯ್ಕ ಮತ್ತಿತರರು ಏಕಮುಖ ವಾಹನ ಸಂಚಾರ ವ್ಯವಸ್ಥೆ ಹಾಗೂ ವಾಹನ ಸ್ಥಳಾಂತರಿಸಲು ಸಹಕರಿಸಿದರು. ಮಳೆ ಆರಂಭವಾದ ಬಳಿಕ ಅಗಲ ಕಿರಿದಾದ ಹಾಗೂ ತಿರುವುಗಳಿರುವ ಈ ರಸ್ತೆಯಲ್ಲಿ ವಾಹನಗಳು ಉರುಳಿ ಬೀಳುವ ಘಟನೆ ಆಗಾಗ ಸಂಭವಿಸುತ್ತಿದೆ.

Leave a Comment

error: Content is protected !!