ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಹಣ್ಣು ಹಂಪಲು ಗಿಡ ವಿತರಣೆ

Suddi Udaya

Updated on:

ಕೊಕ್ಕಡ: ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಕೊಕ್ಕಡದಲ್ಲಿ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಕೊಕ್ಕಡ, ಹಳ್ಳಿಂಗೇರಿ, ಸೌತಡ್ಕ ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಪೆನ್, ಸಿಹಿ ತಿಂಡಿ ವಿತರಣೆ ಮತ್ತು ಹಣ್ಣು ಹಂಪಲು ಗಿಡಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಕೊಡುಗೈ ದಾನಿ ನಾಗೇಶ್ ಕುಮಾರ್, ಯುವ ಮುಖಂಡ ಎಸ್ ಕೆ ಹಕೀಂ, ಕೊಕ್ಕಡ ಕಲಂದರ್ ಎಂ ಹೆಚ್, ಅಶಿಫ್ ಐಡಿಯಲ್, ಗಣೇಶ್ ಕಾಶಿ ,ಹರಿಶ್ಚಂದ್ರ, ಅಶ್ವಿನ್, ಕಿರಣ್, ಗಣೇಶ್ ಪಿಕೆಜಿ, ಹಾಗೂ ನಾಗೇಶ್ ಕುಮಾರ್ ಅಭಿಮಾನಿ ವೃಂದದ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!