ಬೆಳ್ತಂಗಡಿ : ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಬೆಳ್ತಂಗಡಿ : ತಾಲೂಕು ಆಸ್ಪತ್ರೆ ಬೆಳ್ತಂಗಡಿ ಇಲ್ಲಿ ತಾಲೂಕಿನ ಎಲ್ಲಾ ವಿಕಲಚೇತನ ಗುರುತಿನ ಚೀಟಿಯ ನವೀಕರಣ ಮಾಡಲು ಹಾಗೂ ಹೊಸ ಗುರುತಿಸುವಿಕೆಯ ಶಿಬಿರವನ್ನು ತಾಲೂಕು ಆಸ್ಪತ್ರೆ ಬೆಳ್ತಂಗಡಿಯಲ್ಲಿ ವಿಕಲಚೇತನ ಮೇಲ್ವಿಚಾರಕರು (MRW ) ರವರಾದ ಜೋನ್ ಬ್ಯಾಪಿಸ್ಟ್ ರವರ ಮುಂದಾಳತ್ವದಲ್ಲಿ ನಡೆಸಲಾಯಿತು.

ಶಿಬಿರವನ್ನು ಅರ್ಥಪೂರ್ಣವಾಗಿ ನಡೆಸಲು ತಾಲೂಕಿನ ಗ್ರಾಮೀಣ ಪೂರ್ವಸತಿ ಕಾರ್ಯಕರ್ತರಾದ ವಿಪುಲ್ ಗ್ರಾಮ ಪಂಚಾಯತ್ ಉಜಿರೆ, ಚಿರಂಜೀವಿ ಗ್ರಾಮ ಪಂಚಾಯತ್ ಕಣಿಯೂರು, ರಾಧಿಕಾ ಗ್ರಾಮ ಪಂಚಾಯತ್ ಇಳoತಿಲ, ಕೀರ್ತನ್ ಗ್ರಾಮ ಪಂಚಾಯತ್ ಕೊಯ್ಯುರು, ಹರೀಶ್ ಗ್ರಾಮ ಪಂಚಾಯತ್ ಶಿರ್ಲಾಲು, ಶಮೀಮ ಭಾನು ಗ್ರಾಮ ಪಂಚಾಯತ್ ಪುದುವೆಟ್ಟು ,ಮಾನಸ ಗ್ರಾಮ ಪಂಚಾಯತ್ ಕಳಿಯ, ರಂಜಿತ್ ಗ್ರಾಮ ಪಂಚಾಯತ್ ಶಿಬಾಜೆ, ವಿಮಲ, ಗ್ರಾಮ ಪಂಚಾಯತ್ ಕಳೆಂಜ ಪೌಝಿಯಾ, ನಗರ ಪಂಚಾಯತ್ ಬೆಳ್ತಂಗಡಿ ಇವರೆಲ್ಲಾರ ಸಹಕಾರದೊಂದಿಗೆ, ಜಿಲ್ಲಾ ವೈದ್ಯಕೀಯ ಮಂಡಳಿಯ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದುಕೊಂಡು ಅನೇಕ ಬುದ್ಧಿಮಾಂದ್ಯ ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಿ ಸರ್ಕಾರ ಸೌಲಭ್ಯವನ್ನು ಪಡೆದುಕೊಳ್ಳಲು ಸಹಕಾರ ಮಾಡಲಾಯಿತು.

Leave a Comment

error: Content is protected !!