April 2, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಪ್ರಸನ್ನ ಆಂ.ಮಾ. ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿನ ಪ್ರಸನ್ನ ಆಂಗ್ಲ ಮಾಧ್ಯಮ ವಸತಿ ಶಾಲೆ ಇದರ 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ. 24ರಂದು ನೆರವೇರಿತು.

ದೀಪ ಪ್ರಜ್ವಲನ ಮಾಡಿದ ಪ್ರಸನ್ನ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶ್ರೀನಿವಾಸ್, ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ವಿಕಾಸಕ್ಕೆ ಸಂಘಗಳು ಪೂರಕವಾಗಿವೆ ಎಂದು ಅಭಿಪ್ರಾಯ ಪಟ್ಟರು. ಪ್ರಸ್ತಾವನೆಗೈದ ಪ್ರಸನ್ನ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ಕೆ. ಶಂಕರ್ ನಾರಾಯಣ್ ಭಟ್, ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ನಿವಾರಿಸುವಲ್ಲಿ ಸಂಘಗಳು ಕಾರ್ಯಪ್ರವೃತ್ತರಾಗಲಿವೆ ಎಂದರು.

ಶಿಕ್ಷಕಿ ಭಾರತಿ. ಎನ್ ಸ್ವಾಗತಿಸಿದ ಸಭೆಗೆ, ವಿದ್ಯಾರ್ಥಿಗಳಾದ ಅಕ್ಷಾ ಶೆಟ್ಟಿ, ಆಯಿಷಾ, ಸಂಜ್ಞಾ, ನಹ್ಲಾ, ಐಸಿರಿ ಚೇತನ್, ಶಮ್ನಾ ಪ್ರಾರ್ಥಿಸಿ, ಶಿಕ್ಷಕಿ ಜೆರುಶಾ ಪ್ರತಿಜ್ಞಾ ವಿಧಿ ಬೋಧಿಸಿ, ಶಿಕ್ಷಕಿ ಮಿಲನಾ ಕೆ ಧನ್ಯವಾದವಿತ್ತು, ಶಿಕ್ಷಕ , ಅಶ್ವತ್ ಎನ್ ಸಂಘಗಳನ್ನು ರಚಿಸಿ, ಎಂ. ಕೆ ಕನ್ಯಾಡಿ ನಿರೂಪಿಸಿದರು.

ಶಿಕ್ಷಕರುಗಳಾದ ಪ್ರಭಾವತಿ, ಋತ್ವಿಕಾ, ಭಾರತಿ ಎನ್, ಪದ್ಮಲತಾ, ಮಿಲನಾ ಕೆ, ಅನುಪಮಾ, ರೂಪಶ್ರೀ, ಶಿವರಾಮ್ ಕೆ, ಅಶ್ವತ್ ಎನ್ ಸಂಘಗಳ ಯೋಜನೆ ಪ್ರಸ್ತಾಪಿಸಿದರು.

Related posts

ಗೇರುಕಟ್ಟೆ: ಶ್ರೀ ಪಾರ್ಶ್ವನಾಥ ಫ್ಯೂಯಲ್ ಶುಭಾರಂಭ

Suddi Udaya

ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya

ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆ ಹಸ್ತಾಂತರ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

Suddi Udaya

ಜಡಿಮಳೆ: ಕಳೆಂಜ ಕುಟ್ರುಪ್ಪಾಡಿ ರಾಮಣ್ಣ ನಾಯ್ಕರ ಸೋಗೆ ಮನೆ ಛಾವಣಿ ಸಂಪೂರ್ಣ ಕುಸಿತ

Suddi Udaya

ಹತ್ಯಡ್ಕ ಸಹಕಾರಿ ಸಂಘದ ಚುನಾವಣೆ :ಸಹಕಾರ ಭಾರತೀಯ ಅಭ್ಯರ್ಥಿಗಳ ‘ಮಹಾಭಿಯಾನ’ ಪ್ರಚಾರಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ಚಾಲನೆ

Suddi Udaya
error: Content is protected !!